Advertisement

ವಕೀಲ ರಾಜು ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

12:58 PM Jun 02, 2019 | Team Udayavani |

ಧಾರವಾಡ: ನರೇಂದ್ರ ಗ್ರಾಮದಲ್ಲಿ ವಕೀಲ ರಾಜು ಠಾಕೂರ ಮೇಲೆ ನಡೆದ ಹಲ್ಲೆ ಖಂಡಿಸಿ ನಗರದಲ್ಲಿ ವಕೀಲರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

Advertisement

ಗ್ರಾಮದ ಬಸವರಾಜ ಬಾಬಸಾಹೇಬ ದೇಸಾಯಿ ಎಂಬಾತನು ಶುಕ್ರವಾರ ರಾತ್ರಿ ರಾಜು ಠಾಕೂರ ತಮ್ಮ ಮನೆಯ ಹೊರಗಡೆ ನಿಂತಾಗ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಜಗಳ ತೆಗೆದಿದ್ದಾನೆ. ಕುಡಿದ ಅಮಲಿನಲ್ಲಿದ್ದ ಬಸವರಾಜ ನಂತರ ರಾಜುಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಡಿಗೆಯಿಂದ ಹಲ್ಲೆ ಕೂಡಾ ಮಾಡಿದ್ದಾನೆ. ವಕೀಲ ರಾಜು ಎಡಕೈಗೆ ಬಲವಾದ ಪೆಟ್ಟು ಬಿದ್ದಿದ್ದು, ಅವರನ್ನು ಧಾರವಾಡದ ಸಿವಿಲ್ ಅಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಗ್ರಾಮಿಣ ಪೋಲಿಸರು ಇದುವರೆಗೂ ಆಸ್ಪತ್ರೆಗೆ ಭೇಟಿ ನೀಡಿಲ್ಲ. ಕೂಡಲೇ ಆರೋಪಿಯನ್ನು ಬಂಧಿಸಿ ಕಾನೂನುರೀತ್ಯ ಶಿಕ್ಷೆಗೊಳ ಪಡಿಸಬೇಕು. ವಕೀಲ ರಾಜು ಠಾಕೂರಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ನ್ಯಾಯಾಲಯದ ಕಾರ್ಯ ಕಲಾಪಗಳಿಂದ ದೂರ ಉಳಿದ ವಕೀಲರು ಕೆಲ ಹೊತ್ತು ರಸ್ತೆ ತಡೆ ಕೂಡಾ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next