Advertisement

ಭದ್ರತಾ ಪಡೆ ಇರುವಂತೆ ಶಾಸಕನ ಮೇಲೆ ಗುಂಡಿನ ದಾಳಿ: ವಿಡಿಯೋ ವೈರಲ್

08:20 AM May 28, 2021 | Team Udayavani |

ಗುವಾಹಟಿ: ಭದ್ರತಾ ಪಡೆಗಳು ಮತ್ತು ಇತರರು ಸುತ್ತಲೂ ಸೇರಿದ್ದ ಸಮಯದಲ್ಲಿ ಕಾಂಗ್ರೆಸ್ ಶಾಸಕನ ಮೇಲೆ ಅಚಾನಕ್ ಗುಂಡಿನ ದಾಳಿ ನಡೆಸಿದ ಘಟನೆ ಅಸ್ಸಾಂ- ನಾಗಾಲ್ಯಾಂಡ್ ಗಡಿ ಭಾಗದಲ್ಲಿ ನಡೆದಿದೆ. ಜೊರ್ಹಾಟ್ ಜಿಲ್ಲೆಯ ಅರಣ್ಯ ಭಾಗದಲ್ಲಿ ಈ ಘಟನೆ ನಡೆದಿದ್ದು, ಮೂವರು ಪತ್ರಕರ್ತರು ಗಾಯಗೊಂಡಿದ್ದಾರೆ.

Advertisement

ಮರಿಯಾನಿ ಶಾಸಕ ರೂಪ್ ಜ್ಯೋತಿ ಕುರ್ಮಿ ಅವರು ದೆಸ್ಸಾಯ್ ಕಣಿವೆ ಮೀಸಲು ಅರಣ್ಯ ಪ್ರದೇಶದಲ್ಲಿ ಅತಿಕ್ರಮಣದ ಬಗ್ಗೆ ಪರಿಶೀಲನೆಗೆಂದು ತೆರಳಿದ್ದರು. ಶಾಸಕರ ಜೊತೆ ಅವರ ಭದ್ರತಾ ಪಡೆ, ಪತ್ರಕರ್ತರು ಮತ್ತು ಹಲವು ಬೆಂಬಲಿಗರಿದ್ದರು. ಆದರೆ ಈ ವೇಳೆ ಅಚಾನಕ್ ಆಗಿ ಗುಂಡಿನ ದಾಳಿ ನಡೆದಿದ್ದು, ಎಲ್ಲರೂ ತಪ್ಪಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಗಾಲ್ಯಾಂಡ್ ಗಡಿ ಭಾಗದಿಂದ ಗುಂಡಿನ ದಾಳಿ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್ ಬಿಸ್ವಾ ಅವರು ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲು ತಿಳಿಸಿದ್ದಾರೆ.

ಇದನ್ನೂ ಓದಿ:ನಿರ್ಭಯಾ ಪ್ರಕರಣ ನೆನಪಿಸಿದ ಘಟನೆ : ಸಾಮೂಹಿಕ ಅತ್ಯಾಚಾರ:  ವೀಡಿಯೋ ವೈರಲ್‌; ಸೆರೆ

ಅಸ್ಸಾಂ ರಾಜ್ಯವು ನಾಗಾಲ್ಯಾಂಡ್ ಜೊತೆ ಐದು ಜಿಲ್ಲೆಗಳಲ್ಲಿ ಗಡಿ ಹಂಚಿಕೊಂಡಿದೆ. ಚರೈಡಿಯೊ, ಶಿವಸಾಗರ್, ಜೋರ್ಹತ್, ಗೋಲಾಘಾಟ್ ಮತ್ತು ಕಾರ್ಬಿ ಆಂಗ್ಲಾಂಗ್ ಗಳಲ್ಲಿ ಉಭಯ ರಾಜ್ಯಗಳು ಗಡಿ ಹಂಚಿಕೊಂಡಿದೆ. ನಾಗಾಲ್ಯಾಂಡ್ ಕಡೆಯಿಂದ ಅತಿಕ್ರಮಣವಾಗುವ ಕಾರಣದಿಂದ ಕಳೆದ ಎರಡು ದಶಕಗಳಿಂದ ಈ ಜಿಲ್ಲೆಗಳಲ್ಲಿ ಹಿಂಸಾಚಾರಗಳು ನಡೆಯುತ್ತಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next