Advertisement

Kadaba ತಂಡದಿಂದ ಹಲ್ಲೆ: ನಾಲ್ವರ ಬಂಧನ

12:32 AM Feb 24, 2024 | Team Udayavani |

ಕಡಬ: ಮನೆಯ ಬಳಿ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿರುವ ಆರೋಪದಲ್ಲಿ ಕಡಬ ಪೊಲೀಸರು ನಾಲ್ವರನ್ನು ಗುರುವಾರ ರಾತ್ರಿ ಬಂಧಿಸಿದ್ದಾರೆ.

Advertisement

ದೂರಿನ ವಿವರ: ಮರ್ದಾಳ ಶಿವಾಜಿನಗರ ನಿವಾಸಿ ದಿ| ಇಲ್ಯಾಸ್‌ ಅವರ ಪುತ್ರ ಫಯಾಜ್‌ ಪೊಲೀಸರಿಗೆ ದೂರು ನೀಡಿದವರು. ಗುರುವಾರ ಸಂಜೆ ನನ್ನ ತಾಯಿ ಮತ್ತು ಸಹೋದರರೊಂದಿಗೆ ಮನೆಯಲ್ಲಿದ್ದಾಗ ಅಪರಿಚಿತ ಮಹಿಳೆಯೊಬ್ಬಳು ಚಿಕ್ಕ ಮಗುವನ್ನು ಎತ್ತಿಕೊಂಡು ಬಂದಿದ್ದು, ರಿಯಾಝ್ನ ಮನೆ ಯಾವುದು ಎಂದು ಕೇಳಿದರು.

ನಾವು ಇದು ರಿಯಾಝ್ನ ಮನೆ ಅಲ್ಲ ಎಂದರೂ ಮಹಿಳೆ ಅಳುತ್ತಾ ನಿಂತಳು. ಆಗ ನಮ್ಮ ತಾಯಿ ಆಕೆಯನ್ನು ಸಮಾಧಾನಿಸಿ ಮನೆ ಪಕ್ಕದ ಇಬ್ರಾಹಿಂ ಎಂಬ ಹುಡುಗನ ಜತೆ ಆಕೆಯನ್ನು ಮರ್ದಾಳ ಬಸ್‌ ನಿಲ್ದಾಣಕ್ಕೆ ಬಿಟ್ಟು ಬರುವಂತೆ ತಿಳಿಸಿದ್ದರು.

ಅದರಂತೆ ಇಬ್ರಾಹಿಂ ಮಹಿಳೆಯನ್ನು ಸ್ಕೂಟರ್‌ನಲ್ಲಿ ಕುಳ್ಳಿರಿಸಿಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ಆರೋಪಿಗಳಾದ ಜಿನಿತ್‌ ಕುಮಾರ್‌, ಉಮೇಶ್‌, ವಿನುತ್‌, ನಾಗೇಶ್‌ ಹಾಗೂ ಶ್ರೀಕರ ಸೇರಿದಂತೆ 10ರಿಂದ 15 ಮಂದಿ ನನ್ನನ್ನು° ಕರೆದು ಸ್ಕೂಟರ್‌ನಲ್ಲಿ ಹೋದ ಮಹಿಳೆಯ ಬಗ್ಗೆ ವಿಚಾರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಆ ವೇಳೆ ಸ್ಥಳದಲ್ಲಿದ್ದ ನನ್ನ ತಾಯಿ ಸಫಿಯಾ ಅಡ್ಡ ಬಂದಿದ್ದು, ಅವರಿಗೂ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next