Advertisement

Reporters: ಪತ್ರಿಕಾ ವರದಿಗಾರನ ಮೇಲೆ ನಾಲ್ವರಿಂದ ಹಲ್ಲೆ; ಆರೋಪ

01:15 PM Jun 16, 2024 | Team Udayavani |

ಬೆಂಗಳೂರು: ನಟ ದರ್ಶನ್‌ ಆ್ಯಂಡ್‌ ಟೀಮ್‌ನ ಕೋರ್ಟ್‌ಗೆ ಹಾಜರುಪಡಿಸುವ ವೇಳೆ ವರದಿ ಮಾಡಲು ಹೋಗ ವರದಿಗಾರರೊಬ್ಬರಿಗೆ ನಾಲ್ವರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದ್ದು, ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಎನ್‌ಸಿಆರ್‌ ದಾಖಲಾಗಿದೆ.

Advertisement

ರಕ್ಷಿತ್‌ ಗೌಡ ದೂರು ನೀಡಿದವರು. ಕಳೆದ 3 ತಿಂಗಳಿಂದ ಆಂಗ್ಲ ದಿನಪತ್ರಿಕೆಯೊಂದರಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದೇನೆ. ಶನಿವಾರ ನಟ ದರ್ಶನ್‌ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲು ಕರೆತರುವುದನ್ನು ವರದಿ ಮಾಡಲು ನ್ಯಾಯಾಲಯದ ಬಳಿ ಹೋಗಿದ್ದೆ. 2ನೇ ಮಹಡಿಯ ಎಕನಾಮಿಕ್ಸ್‌ ಅಫೆನ್ಸ್‌ ಕೋರ್ಟ್‌ ಹತ್ತಿರದ ವಾಟರ್‌ ಫಿಲ್ಟರ್‌ ಪ್ಲಾಂಟ್‌ ಬಳಿ ನಿಂತಿದ್ದೆ. ಆ ಸಮಯದಲ್ಲಿ ನಾಲ್ವರು ಅಪರಿಚಿತರು ಫೋನ್‌ ಇಟ್ಟುಕೊಂಡು ಏಕೆ ನಿಂತಿರುವೆ ಎಂದು ನನಗೆ ಕೇಳಿದರು. ನಾನು ವರದಿಗಾರ ಎಂದು ಹೇಳಿದೆ. ಆಗ ಅವರು ನಿನಗೇನು ಇಲ್ಲಿ ಕೆಲಸ ಎಂದು ಹೇಳುತ್ತಾ ಇಬ್ಬರು ಕೈಗಳಿಂದ ನನಗೆ ಹಲ್ಲೆ ಮಾಡಿದರು. ಇನ್ನಿಬ್ಬರು ಕೋರ್ಟ್‌ ಒಳಗೆ ಬಂದಿರುವುದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಎನ್‌ಸಿಆರ್‌ನಲ್ಲಿ ರಕ್ಷಿತ್‌ ಉಲ್ಲೇಖೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next