Advertisement

ATM ದರೋಡೆಕೋರರ ಬೆನ್ನತ್ತಿ ರೋಚಕ ಕಾರ್ಯಾಚರಣೆ

01:51 AM Sep 29, 2024 | Team Udayavani |

ಚೆನ್ನೈ: ಕೇರಳದ ತೃಶೂರ್‌ನ ಎಟಿಎಂ ದೋಚಿ ಪರಾರಿಯಾಗಲು ಯತ್ನಿಸಿದ್ದ 7 ಜನ ಖದೀಮರ ಗುಂಪನ್ನು ಪೊಲೀಸರು 12 ಕಿ.ಮೀ. ದೂರದವರೆಗೆ ಬೆನ್ನಟ್ಟಿ ತಮಿಳುನಾಡು ಗಡಿಯಲ್ಲಿ ಸೆರೆಹಿಡಿದಿದ್ದಾರೆ. ಈ ವೇಳೆ ಕಳ್ಳರು ಹಲ್ಲೆಗೆ ಯತ್ನಿಸಿದ್ದರಿಂದ ಪೊಲೀಸರು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಆಗ ಓರ್ವ ಮೃತಪಟ್ಟು ಮತ್ತೂಬ್ಬನ ಕಾಲಿಗೆ ಗಾಯವಾಗಿದೆ.

Advertisement

ತೃಶೂರ್‌ನ ಎಟಿಎಂಗೆ ಬಂದು ಗ್ಯಾಸ್‌ ಕಟರ್‌ ಬಳಸಿ, 65 ಲಕ್ಷ ರೂ.ಗಳಷ್ಟು ಹಣ ದೋಚಿದ್ದಾರೆ. ಪೊಲೀಸರು ಎಟಿಎಂ ಹೊರಗಿನ ಸಿಸಿಟಿವಿ ಮೂಲಕ ಕಳ್ಳರ ಕಾರು ಪತ್ತೆ ಹಚ್ಚಿದ್ದಾರೆ. ತಮಿಳುನಾಡಿಗೆ ಕಾರು ಹೊರಟ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೆಲ ಸಮಯದ ಬಳಿಕ ಕಾರು ನಾಪತ್ತೆಯಾಗಿದ್ದು, ಅದೇ ಸಮಯದಲ್ಲಿ ಅದೇ ಸ್ಥಳದಲ್ಲಿ ಕಂಟೇನರ್‌ ಹೋಗುವ ದೃಶ್ಯ ದೊರೆತಿದೆ. ಅನುಮಾನದಲ್ಲಿ ಪೊಲೀ ಸರು ಕಂಟೇನರ್‌ ಬೆನ್ನಟ್ಟಿ ಪರೀಕ್ಷಿಸಿದ್ದಾರೆ. ಆಗ ಅದರಲ್ಲಿ ಕಳ್ಳರ ಕಾರ್‌ ಪತ್ತೆಯಾ ಗಿದೆ. ಈ ಕಂಟೇನರ್‌ ಅನ್ನು ಬೆಂಗಳೂ ರಿನಿಂದ ಬಾಡಿಗೆಗೆ ಪಡೆಯಲಾಗಿತ್ತು. ಹರಿಯಾಣದ ಕಳ್ಳರು, ಕರ್ನಾಟಕ, ಆಂಧ್ರ, ತ.ನಾಡಿನಲ್ಲಿ ಎಟಿಎಂ ದೋಚಿ ರುವ ಆರೋಪ ಎದುರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next