Advertisement

Shirva: ಆಟಿ ಅಮಾವಾಸ್ಯೆ ಕಷಾಯ ವಿತರಣೆ

07:34 AM Jul 17, 2023 | Team Udayavani |

ಶಿರ್ವ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿರ್ವದ ಸಮಾಜ ಸೇವಕ ಅ‌ನಂತ್ರಾಯ ಶೆಣೈ ಅವರ ನೇತೃತ್ವದಲ್ಲಿ ಶಿರ್ವ ಪತಂಜಲಿ ಯೋಗ ಸಮಿತಿಯ ಕಚೇರಿಯಲ್ಲಿ ಆಟಿ ಅಮಾವಾಸ್ಯೆಯ ಈ ದಿನ (ಜು.17) ಹಾಲೆ ಮರದ ಕಷಾಯ ವಿತರಿಸಲಾಯಿತು.

Advertisement

ಜನರು ಜಾತಿ ಮತ ಭೇದವಿಲ್ಲದೆ ಮುಂಜಾನೆ 5 ಗಂಟೆಯಿಂದಲೇ ಕಷಾಯವನ್ನು ಪಡೆದುಕೊಂಡರು. ಬಾಟಲಿಯಲ್ಲಿ ಕಷಾಯ ಮತ್ತು ಮೆಂತೆ ಗಂಜಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸುಮಾರು 15 ಜನರ ತಂಡವು ಕಷಾಯ ತಯಾರಿಸಲು ಭಾಗವಹಿಸಿದ್ದು ಮುಂಜಾನೆಯಿಂದಲೇ ಜನರು ಸಾಲುಗಟ್ಟಿ ನಿಂತು ಕಷಾಯವನ್ನು ಸೇವಿಸಿ ಮನೆಮಂದಿಗೆ ಕೊಂಡೊಯ್ಯಲು ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next