Advertisement

ಆರ್ಥಿಕ ನೆರವಿಗೆ ಕ್ರೀಡಾಪಟು ಮನವಿ

11:04 PM Sep 01, 2019 | Lakshmi GovindaRaj |

ವಿಜಯಪುರ: ವಿಶ್ವದ ಅಪರೂಪದ ಕ್ರೀಡೆ ಎನಿಸಿರುವ ಸಿಸ್ಟೋಬಾಲ್‌ ಕ್ರೀಡಾಪಟು ಐಶ್ವರ್ಯಾ ಬಿರಾದಾರ ಬ್ಯಾಂಕಾಂಕ್‌ನಲ್ಲಿ ಸೆ.18ರಿಂದ ಸಿಸ್ಟೋಬಾಲ್‌ ಫೆಡರೇಷನ್‌ ಆಫ್‌ ಇಂಡಿಯಾ ಆಯೋಜಿಸಿರುವ ಪಂದ್ಯಾವಳಿಯಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದು, ಆರ್ಥಿಕ ಸಂಕಷ್ಟದಿಂದಾಗಿ ನೆರವಿಗೆ ಮನವಿ ಮಾಡಿದ್ದಾಳೆ.

Advertisement

ನಗರದಲ್ಲಿ ಬಿಕಾಂ ಓದುತ್ತಿರುವ ಐಶ್ವರ್ಯಾ ಮೊದಲು ಥ್ರೋಬಾಲ್‌ನಲ್ಲಿ ರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದಾಳೆ. ಕ್ರೀಡಾ ಮಾರ್ಗದರ್ಶಕರ ಸಲಹೆಯಂತೆ ಸಿಸ್ಟೋಬಾಲ್‌ ಆಯ್ಕೆ ಮಾಡಿ ಕೊಂಡು ಬೆಂಗಳೂರಿನಲ್ಲಿ ನಡೆದ ಶಿಬಿರದಲ್ಲಿ ಪಾಲ್ಗೊಂಡು, ಕಷ್ಟಪಟ್ಟು ಕಲಿತು ಪರಿಣಿತಿ ಸಾಧಿಸಿದ್ದಾಳೆ.

ಐಶ್ವರ್ಯಾ ತಂದೆ ಕೂಲಿ ಕಾರ್ಮಿಕ, ಕೂಲಿ ಬಂದರೆ ಉಪಜೀವನ ಇಲ್ಲವಾದರೆ ಹೊಟ್ಟೆಗೆ ಬಟ್ಟೆ ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ. ಆದರೆ ಮಗಳ ಸಾಧನೆ ಸೊರಗಬಾರದೆಂದು ದಾನಿಗಳ ಮೊರೆ ಹೋಗಿದ್ದಾರೆ. ಬ್ಯಾಂಕಾಕ್‌ಗೆ ತೆರಳಲು ಸುಮಾರು 55 ಸಾವಿರ ರೂ. ಅವಶ್ಯಕತೆ ಇದೆ. ಹೆಚ್ಚಿನ ಮಾಹಿತಿ ಹಾಗೂ ನೆರವು ನೀಡಲು ಐಶ್ವರ್ಯ ಅವರ ಮೊ.7204812124 ಸಂಪರ್ಕಿಸಲು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next