Advertisement

ಏರ್‌ಪೋರ್ಟಲ್ಲಿ ಗಾಯಕ ಉದಿತ್‌ ಪುತ್ರನ ರಾದ್ಧಾಂತ

07:05 AM Oct 03, 2017 | |

ರಾಯ್ಪುರ: ಬಾಲಿವುಡ್‌ ಗಾಯಕ ಉದಿತ್‌ ನಾರಾಯಣ್‌ ಪುತ್ರ ಆದಿತ್ಯ ನಾರಾಯಣ್‌ ರಾಯ್ಪುರ ಏರ್‌ಪೋರ್ಟಲ್ಲಿ ಇಂಡಿಗೋ ವಿಮಾನ ಸಿಬ್ಬಂದಿ ಜತೆಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. 

Advertisement

ಮಿತಿ ಗಿಂತ ಹೆಚ್ಚು ಬ್ಯಾಗೇಜ್‌ ಇದ್ದಿದ್ದರಿಂದ 13 ಸಾವಿರ ರೂ. ಹೆಚ್ಚುವರಿ ಶುಲ್ಕ ನೀಡಬೇಕೆಂದು ಆದಿತ್ಯಗೆ ಸಿಬ್ಬಂದಿ ಸೂಚಿಸಿದರು. ಅದಕ್ಕೊಪ್ಪದ ಆದಿತ್ಯ ವಾಗ್ವಾದಕ್ಕೆ ಇಳಿದರು. ನನ್ನನ್ನು ವಿಮಾನದಿಂದ ಇಳಿಸಿದರೆ ನಿನ್ನನ್ನು ಮುಂಬೈನಲ್ಲಿ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಜತೆಗೆ ಅವಹೇಳಕಾರಿ ಪದ ಬಳಕೆ ಮಾಡಿದ್ದಾರೆನ್ನಲಾಗಿದೆ. ಸಿಬ್ಬಂದಿ ಜತೆ ಕ್ಷಮೆ ಕೋರಿದ ಬಳಿಕ ಗಾಯಕನ ಪುತ್ರಗೆ ಬೋರ್ಡಿಂಗ್‌ ಪಾಸ್‌ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next