Advertisement

ಆ. 15ಕ್ಕೆ ಬಿಜೆಪಿ ತೊಲಗಿಸಿ ರ್ಯಾಲಿ: ಮಮತಾ

06:00 AM Jul 22, 2018 | Team Udayavani |

ಕೋಲ್ಕತಾ: ದೇಶಾದ್ಯಂತ ಬಡಿದು ಸಾಯಿಸುವ ಕೃತ್ಯಗಳು ನಡೆಯುತ್ತಿವೆ. ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ತಾಲಿಬಾನಿಗರನ್ನು ಸೃಷ್ಟಿಸುತ್ತಿವೆ. ಆ.15 ರಂದು ಬಿಜೆಪಿ ಹಠಾವೋ, ದೇಶ್‌ ಬಚಾವೋ (ಬಿಜೆಪಿ ತೊಲಗಿಸಿ, ದೇಶ ಉಳಿಸಿ) ರ್ಯಾಲಿ ಕೈಗೊಳ್ಳಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.

Advertisement

ಶನಿವಾರ ನಡೆದ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ ಮೆಗಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಸಂಸತ್‌ನ ಒಳಗೆ ಬಿಜೆಪಿಗೆ ವಿಶ್ವಾಸಮತವಿದೆ. ಆದರೆ, ಹೊರಗೆ ಆ ಸಂಖ್ಯೆ ಇಲ್ಲ. ಇತ್ತೀಚೆಗೆ ಬಿಜೆಪಿ ಶಕ್ತಿ ಕ್ಷೀಣಿಸುತ್ತಿದೆ ಎಂದಿದ್ದಾರೆ. ಟಿಎಂಸಿ ಸೇರ್ಪಡೆ: ಇದೇ ವೇಳೆ,, ಬಿಜೆಪಿ ಮುಖಂಡ ಚಂದನ್‌ ಮಿತ್ರಾ, ಕಾಂಗ್ರೆಸ್‌ನ ನಾಲ್ವರು ಶಾಸಕರು ಸಿಎಂ ಬ್ಯಾನರ್ಜಿ ಸಮ್ಮುಖದಲ್ಲಿ ಟಿಎಂಸಿಗೆ ಸೇರ್ಪಡೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next