Advertisement

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

07:32 AM Jan 18, 2022 | Team Udayavani |

ಮೇಷ:

Advertisement

ಆರೋಗ್ಯ ಗಮನಿಸಿ. ಎಲ್ಲಾ ವಿಚಾರಗಳಲ್ಲಿ ಎಚ್ಚರಿಕೆಯಿಂದ ತಾಳ್ಮೆಯಿಂದ ವ್ಯವಹರಿಸಿ. ಹಲವಾರು ಸ್ಪರ್ಧಿಗಳು ಎದುರಾದಾರು. ಉದ್ಯೋಗ ವ್ಯವಹಾರಗಳಲ್ಲಿ ನಿಷ್ಠೆ ತೋರುವುದರಿಂದ ಪ್ರಗತಿ. ನಿರೀಕ್ಷಿತ ಧನಸಂಪತ್ತು ವೃದ್ಧಿ.

ವೃಷಭ:

ಸರಿಯಾದ ನಿಯಮ ಪಾಲಿಸುವುದ ರಿಂದ ದೇಹಾರೋಗ್ಯ ಉತ್ತಮ ದೀರ್ಘ‌ ಸಂಚಾರ ಸಂಭವ. ಪರರ ವಿಚಾರದಲ್ಲಿ ಹಸ್ತಕ್ಷೇಪ ಮಾಡದಿರಿ. ಗೃಹ ವಾಹನಾದಿ ಸುಖ. ಮಕ್ಕಳಿಂದ ಸಂತೋಷ ವೃದ್ಧಿ.

ಮಿಥುನ:

Advertisement

ಕೆಲಸ ಕಾರ್ಯಗಳಲ್ಲಿ ಚುರುಕುತನ. ನೈಪುಣ್ಯತೆ ಉದಾರ ಮನೋಭಾವ. ಧೈರ್ಯ ಉತ್ಸಾಹ ತೋರೀತು. ಅಭಿವೃದ್ಧಿದಾಯಕ ಬದಲಾವಣೆ. ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ. ದೀರ್ಘ‌ ಪ್ರಯಾಣಕ್ಕೆ ಅವಕಾಶ.

ಕಟಕ:

ಹಿರಿಯರಿಂದ ಸುಖ. ಸ್ಥಾನ ಸುಖ ಕ್ಕಾಗಿ ಹೆಚ್ಚಿದ ಪರಿಶ್ರಮ. ಮಕ್ಕಳ ವಿಚಾರದಲ್ಲಿ ನಿರೀಕ್ಷಿತ ಬದಲಾವಣೆ. ಗೃಹ ಆಸ್ತಿ ವಿಚಾರದಲ್ಲಿ ಪ್ರಗತಿದಾಯಕ ಮುನ್ನಡೆ. ಉತ್ತಮ ಆರೋಗ್ಯ. ದಾಂಪತ್ಯ ಸುಖ ಮಧ್ಯಮ.

ಸಿಂಹ:

ಆರೋಗ್ಯ ವೃದ್ಧಿ. ನಿರೀಕ್ಷಿತ ಧನಲಾಭ ಪ್ರಾಪ್ತಿ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಗುರುಹಿರಿಯರೊಂದಿಗೆ ಭಿನ್ನಾಭಿಪ್ರಾಯಕ್ಕೆ ಅವಕಾಶ ಕಲ್ಪಿಸದಿರಿ. ಆಸ್ತಿ ವಿಚಾರದಲ್ಲಿ ಸಾಮಾನ್ಯ ಫ‌ಲ.

ಕನ್ಯಾ:

ಆರೋಗ್ಯ ಗಮನಿಸಿ. ದೀರ್ಘ‌ ಸಂಚಾರ ಸಂಭವ. ಆಹಾರ ಸೇವನೆಯಲ್ಲಿ ಎಚ್ಚರವಿರಲಿ. ಹಣಕಾಸಿನ ವಿಚಾರದಲ್ಲಿ ಕಟ್ಟಿ ಹಾಕಿದ ಪರಿಸ್ಥಿತಿ ಸಂಭವ. ಪಾಲುದಾರರಿಂದ ಉದ್ಯೋಗದಲ್ಲಿ ವ್ಯವಹಾರಗಳಲ್ಲಿ ಪ್ರಗತಿ.

ತುಲಾ:

ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಉತ್ತಮ ಬದಲಾವಣೆ. ದೂರದ ಮಿತ್ರರ ಭೇಟಿ. ದೀರ್ಘ‌ ಪ್ರಯಾಣ ಸಂಭವ. ಪರರ ವಿಚಾರವನ್ನು ಆಲಿಸಿ ಆದರೆ ನಿರ್ಣಯ ನಿಮ್ಮದಿರಲಿ. ಮಕ್ಕಳಿಂದ ಸಂತೋಷ.

ವೃಶ್ಚಿಕ:

ನಿರೀಕ್ಷಿತ ಸ್ಥಾನ ಗೌರವಾದಿ ಸುಖ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ನಿರೀಕ್ಷೆಗೂ ಮೀರಿದ ಧನ ಸಂಪಾದನೆ. ಉತ್ತಮ ವಾಕ್‌ಚತುರತೆ ಜನಾದಾರ ಪ್ರಾಪ್ತಿ. ವಿದ್ಯಾರ್ಜನೆಯಲ್ಲಿ ಪ್ರಗತಿ. ದೈಹಿಕ ಆರೋಗ್ಯ ಉತ್ತಮ.

ಧನು:

ಗೃಹದಲ್ಲಿ ಸಂತಸದ ವಾತಾವರಣ. ಬಂಧುಮಿತ್ರರ ಆಗಮನ. ಮಾತೃ ಸಮಾನರಿಂದ ಪ್ರೋತ್ಸಾಹ. ಉದ್ಯೋಗ ವ್ಯವಹಾರ ಗಳಲ್ಲಿ ಹಿರಿಯರ ಪ್ರೋತ್ಸಾಹ ಸಹಕಾರದಿಂದ ಪ್ರಗತಿ. ನಿರೀಕ್ಷಿತ ಧನ ಲಾಭ.

ಮಕರ:

ಆರೋಗ್ಯ ಗಮನಿಸಿ. ಮಾತಿನಲ್ಲಿ ತಾಳ್ಮೆ ಸಹನೆ ಅಗತ್ಯ. ಸಹೋದರ ಸಮಾನರಿಂದಲೂ ಸಹೋದ್ಯೋಗಿಗಳಿಂದ ಸಹಕಾರ ಲಭ್ಯ. ಗೃಹ ವಾಹನ ಆಸ್ತಿ ವಿಚಾರಗಳಲ್ಲಿ ಮುನ್ನಡೆ. ದಾಂಪತ್ಯ ತೃಪ್ತಿಕರ.

ಕುಂಭ:

ವಿದ್ಯಾರ್ಜನೆ ಜ್ಞಾನ ಸಂಪಾದನೆಯಲ್ಲಿ ಮಗ್ನ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ನಿರೀಕ್ಷಿತ ವರಮಾನ ಪ್ರಾಪ್ತಿ. ಅನ್ಯರ ಮೇಲೆ ಅವಲಂಬಿತರಾಗದೇ ಸ್ವಪ್ರಯತ್ನದಲ್ಲಿ ಮುಂದುವರಿಯಿರಿ.

ಮೀನ:

ಉತ್ತಮ ಸುದೃಢ ಆರೋಗ್ಯ. ಉದ್ಯೋಗ ವ್ಯವಹಾರಗಳಲ್ಲಿ ಕೈಗೊಂಡ ಸಫ‌ಲತೆಯಿಂದ ಮಾನಸಿಕ ತೃಪ್ತಿ. ದೇವತಾ ಸ್ಥಳ ಸಂದರ್ಶನ. ಹೆಚ್ಚಿದ ವರಮಾನ. ಗೃಹದಲ್ಲಿ ಸಂತಸದ ವಾತಾವರಣ. ಸಾಂಸಾರಿಕ ಸುಖ ವೃದ್ಧಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

Advertisement

Udayavani is now on Telegram. Click here to join our channel and stay updated with the latest news.

Next