Advertisement

ರವಿವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

07:25 AM Jan 02, 2022 | Team Udayavani |

ಮೇಷ:

Advertisement

ಪ್ರಜ್ಞೆ , ಪ್ರತಿಭೆ, ಬುದ್ಧಿವಂತಿಕೆ ಸಂದರ್ಭೋಚಿತ ನಡೆ ನುಡಿಯಿಂದ ನಾಯಕತ್ವ ಗುಣವೃದ್ಧಿ. ಅಧ್ಯಯನ ನಿಮಿತ್ತ ಪ್ರಯಾಣ ಯಶಸ್ಸು ಲಭ್ಯ. ಗುರುಹಿರಿಯರ ಉತ್ತಮ ಮಾರ್ಗದರ್ಶನದ ಲಾಭ. ಧನಸಂಪತ್ತಿನಲ್ಲಿ ಪ್ರಗತಿ.

ವೃಷಭ:

ಉತ್ತಮ ವಾಕ್‌ ಚತುರತೆ. ಸಾಹಸದಿಂದ ಕೂಡಿದ ಧನಾರ್ಜನೆ. ಗೃಹ ಆಸ್ತಿ, ಕಟ್ಟಡ ವಿಚಾರಗಳಲ್ಲಿ ಧನವ್ಯಯ. ಮಿತ್ರರ ನಿಮಿತ್ತ ಹೆಚ್ಚಿದ ಜವಾಬ್ದಾರಿ. ಉದ್ಯೋಗ ವ್ಯವಹಾರಗಳಲ್ಲಿ ಜವಾಬ್ದಾರಿಯುತ ನಡೆಯಿಂದ ಕೀರ್ತಿ ಸಂಪಾದನೆ.

ಮಿಥುನ:

Advertisement

ಆಚಾರ ವಿಚಾರದಲ್ಲಿ ಮಗ್ನತೆ. ಅಧ್ಯಯನ ಅಧ್ಯಾಪನದಲ್ಲಿ ಗಣನೀಯ ಪ್ರಗತಿ. ಮಕ್ಕಳಿಂದ ಸಂತೋಷ. ಉದ್ಯೋಗ ವ್ಯವಹಾರ ಗಳಲ್ಲಿ ಉತ್ತಮ ಧನಸಂಪತ್ತು ವೃದ್ಧಿ. ದಾಂಪತ್ಯದಲ್ಲಿ ಉತ್ತಮ ಹೊಂದಾಣಿಕೆಯಿಂದ ಮಹತ್ಕಾರ್ಯ ಸಫ‌ಲತೆ.

ಕಟಕ:

ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ಗುರುಹಿರಿಯರ ಆರೋಗ್ಯ ಗಮನಿಸಿ. ಗೃಹ ಸಂಬಂಧೀ ವಿಚಾರಗಳಲ್ಲಿ ಧನವ್ಯಯ. ದಾಂಪತ್ಯ ಸುಖ ವೃದ್ಧಿ. ನೂತನ ಮಿತ್ರರ ಭೇಟಿ.

ಸಿಂಹ:

ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ. ಸ್ಥಾನ ಗೌರವಾದಿ ವೃದ್ಧಿ . ಮಕ್ಕಳಿಂದ ಸಂತೋಷ. ಗುರುಹಿರಿಯರ ಪ್ರೋತ್ಸಾಹ. ಉದ್ಯೋಗ ವ್ಯವಹಾರಗಳಲ್ಲಿ ಪರರಿಗೆ ಸಲಹೆ ಮಾರ್ಗದರ್ಶನ ನೀಡುವ ಅವಕಾಶ. ದಾಂಪತ್ಯ ಸುಖ ಮಧ್ಯಮ.

ಕನ್ಯಾ:

ಉತ್ತಮ ಆಲೋಚನೆಯಿಂದ ಕೂಡಿದ ಮಾತುಗಾರಿಕೆ. ಉದ್ಯೋಗ ವ್ಯವಹಾರಗಳಲ್ಲಿ ಮೇಲಾಧಿಕಾರಿಗಳ ಗುರುಹಿರಿಯರ ಸಹಾಯ ಸಹಕಾರ ಲಭ್ಯ. ಆರೋಗ್ಯ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ.

ತುಲಾ:

ಆರೋಗ್ಯ ವೃದ್ಧಿ. ಅತೀ ಆಸೆ ಮಾಡದೇ ಬಂದ ಅವಕಾಶ ಉಪಯೋಗಿಸಿಕೊಳ್ಳಿ. ಉತ್ತಮ ಜನ ಮನ್ನಣೆ. ನಿರೀಕ್ಷೆಗಿಂತಲೂ ಅಧಿಕ ಧನಾರ್ಜನೆ. ನಿರೀಕ್ಷಿಸಿದ ಕಾರ್ಯ ಸಾಧಿಸಿದ ಸಮಾಧಾನ. ವಿದ್ಯಾರ್ಥಿಗಳಿಗೆ, ದಂಪತಿಗಳಿಗೆ ಶುಭ ಫ‌ಲದ ದಿನ.

ವೃಶ್ಚಿಕ:

ರಾಜಕೀಯ ನಾಯಕರಿಗೆ ಉತ್ತಮ ಜನಮನ್ನಣೆ. ಹೆಚ್ಚಿನ ಜವಾಬ್ದಾರಿ ಸಿಗುವ ಅವಕಾಶ. ನೂತನ ಮಿತ್ರರ ಸಮಾಗಮ. ಬಂಧುಗಳಿಂದ ಪ್ರೋತ್ಸಾಹ. ಸಂಸಾರಸ್ಥರಿಗೆ, ವಿದ್ಯಾರ್ಥಿಗಳಿಗೆ ಸ್ಥಾನ ಗೌರವಾದಿಗಳ ಸುಖ. ಅವಿವಾಹಿತರಿಗೆ ವಿವಾಹ ಭಾಗ್ಯ.

ಧನು:

ಪಾಲುದಾರಿಕಾ ವ್ಯವಹಾರಸ್ಥರೂ, ದಂಪತಿಗಳು ತಾಳ್ಮೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಪ್ರಯಾಣ ಅವಕಾಶ. ಸ್ಥಾನಮಾನಕ್ಕೆ ಕೊರತೆ ಕಾಣದು. ಜಲೋತ್ಪನ್ನ ವಸ್ತುಗಳಿಂದ ಲಾಭ. ಆರೋಗ್ಯ ಅನುಕೂಲಕರ.

ಮಕರ:

ಪರದೇಶದ ಕಾರ್ಯಗಳಲ್ಲಿ ನಿರೀಕ್ಷಿತ ಗೌರವಾದಿ ಪ್ರಾಪ್ತಿ. ಉತ್ತಮ ಧನಾರ್ಜನೆ. ಆರೋಗ್ಯ ವೃದ್ಧಿ. ಮಿತ್ರರಲ್ಲಿ, ಮಕ್ಕಳಲ್ಲಿ ತಾಳ್ಮೆಯಿಂದ ವರ್ತಿಸಿ. ನೀರಿನಿಂದ ಉತ್ಪನ್ನ ವಸ್ತುಗಳಿಂದ ಆಭರಣ, ವಸ್ತ್ರ ಆಹಾರೋದ್ಯಮ ವ್ಯವಹಾರಸ್ಥರಿಗೆ ನಿರೀಕ್ಷಿತ ಲಾಭ.

ಕುಂಭ:

ಅನ್ಯರ ಸಹಾಯ ನಿರೀಕ್ಷಿಸದೆ ತಾಳ್ಮೆಯಿಂದ ಕಾರ್ಯ ನಿರ್ವಹಿಸಿ ಗುರಿ ಸಾಧಿಸಿರಿ. ಧನಾರ್ಜನೆಗೆ ಅನುಕೂಲಕರ ಪರಿಸ್ಥಿತಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮದಿಂದ ಯಶಸ್ಸು. ಗಣಿ, ಭೂ ವ್ಯವಹಾರದವರಿಗೆ ಅನುಕೂಲ ಪರಿಸ್ಥಿತಿ.

ಮೀನ:

ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ದೇಶ ವಿದೇಶದ ವಿದ್ಯಾಲಯದಲ್ಲಿ ಅವಕಾಶ. ದೀರ್ಘ‌ ಪ್ರಯಾಣದಿಂದ ಲಾಭ. ರಾಜಕೀಯ ಕಾರ್ಯ ಕ್ಷೇತ್ರದಲ್ಲಿ ರಹಸ್ಯ ವ್ಯವಹಾರದಿಂದ ನಿರೀಕ್ಷಿತ ಸಾಧನೆ. ಅಭಿವೃದ್ಧಿದಾಯಕ ಧನಾರ್ಜನೆ.

Advertisement

Udayavani is now on Telegram. Click here to join our channel and stay updated with the latest news.

Next