Advertisement

ಗ್ರಾ.ಪಂ. ಚುನಾವಣೆ ಹಿನ್ನೆಲೆ: ನಾಲ್ಕೇ ದಿನಕ್ಕೆ ಮುಗಿಯಲಿದೆ ಅಧಿವೇಶನ!

02:56 PM Dec 08, 2020 | keerthan |

ಬೆಂಗಳೂರು: ಸೋಮವಾರ ಆರಂಭವಾದ ರಾಜ್ಯ ವಿಧಾನಮಂಡಲ ಅಧಿವೇಶನ ಗುರುವಾರಕ್ಕೆ ಮುಗಿಯಲಿದೆ. ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನಲೆಯಲ್ಲಿ ಡಿ.15ರಂದು ಮುಗಿಯಬೇಕಿದ್ದ ಅಧಿವೇಶನವನ್ನು ನಾಲ್ಕೇ ದಿನಕ್ಕೆ ಮೊಟಕುಗೊಳಿಸಲು ನಿರ್ಧರಿಸಲಾಗಿದೆ.

Advertisement

ಮೂರು ಪಕ್ಷಗಳ ಶಾಸಕರ ಒತ್ತಾಯದ ಮೇರೆಗೆ ಕಲಾಪ ವ್ಯವಹಾರ ಸಲಹಾ ಸಮಿತಿಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಕಲಾಪ ಮೊಟಕುಗೊಳಿಸವ ನಿರ್ಧಾರದ ಬಗ್ಗೆ ಬಿಎಸಿ ಸಭೆ ಬಳಿಕ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಈ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾನೂನು ಮಂಡನೆ: ನಳಿನ್ ಕಟೀಲ್

ಗುರುವಾರಕ್ಕೆ ಅಧಿವೇಶನ ಅಂತ್ಯವಾಗುವ ಹಿನ್ನಲೆಯಲ್ಲಿ ನಾಳೆ ಮತ್ತು ನಾಡಿದ್ದು ಮಸೂದೆಗಳ ಮಂಡನೆ ನಡೆಯಲಿದೆ. ಮಹತ್ವದ ಒನ್ ನೇಷನ್, ಒನ್ ಇಲೆಕ್ಷನ್ ಚರ್ಚೆ ಮುಂದಿನ ಅಧಿವೇಶನಕ್ಕೆ ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next