Advertisement

ಪಡೆದುಕೊಂಡ ಸಾಲ ಹಿಂದಿರುಗಿಸದ್ದಕ್ಕೆ ಹಲ್ಲೆ

10:48 PM Mar 17, 2023 | Team Udayavani |

ಸಿದ್ದಾಪುರ: ಪಡೆದುಕೊಂಡಿದ್ದ ಸಾಲದ 10 ಸಾವಿರ ರೂ. ಮೊತ್ತದಲ್ಲಿ ಬಾಕಿ ಇರುವ 2 ಸಾವಿರ ರೂ. ಹಣಕ್ಕಾಗಿ ಉಳ್ಳೂರು-74 ಗ್ರಾಮದ ಸುರೇಶ ಶೆಟ್ಟಿ ಅವರು ಮನೆಯ ಒಳಗೆ ಆಕ್ರಮ ಪ್ರವೇಶ ಮಾಡಿ, ಗ್ಯಾಸ್‌ ಸಿಲಿಂಡರ್‌ ತೆಗೆದುಕೊಂಡು ಹೋಗಲು ಯತ್ನಿಸಿದರು. ಆ ಸಂದರ್ಭ ಹಣ ಹಿಂದಿರುಗಿಸುದ್ದಾಗಿ ಹೇಳಿದರೂ ಕೇಳದೆ ಕೈಯಿಂದ ಹಲ್ಲೆ ನಡೆಸಿದರು ಎಂದು ಕುಷ್ಠ ನಾಯ್ಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಕುಷ್ಠ ನಾಯ್ಕ ಅವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next