Advertisement

ಕಲಬುರಗಿಯಲ್ಲಿ ವೈದ್ಯರು, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ, ಕಲ್ಲು ತೂರಾಟ:ಅಧಿಕಾರಿಗಳು ಪರಾರಿ

03:40 PM Jun 15, 2020 | keerthan |

ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮರಮಂಚಿ‌ ಗ್ರಾಮದಲ್ಲಿ ಆಶಾ‌ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಲಾಗಿದೆಯಲ್ಲದೇ ಅಧಿಕಾರಿಗಳ ವಾಹನ ಮೇಲೂ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.

Advertisement

ಮರಮಂಚಿ ತಾಂಡಾದಲ್ಲಿ 15 ಜನರಿಗೆ ಕೋವಿಡ್-19 ಸೋಂಕು ಪತ್ತೆಯಾಗಿದೆ. ಇವರೆಲ್ಲರೂ ಮುಂಬೈನಿಂದ ವಾಪಸ್ ಬಂದವರಾಗಿದ್ದಾರೆ. ಕೋವಿಡ್-19 ಸೋಂಕು ಪತ್ತೆಯಾದ ಹಿನ್ನಲೆ ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸಲು ತಾಂಡಾಕ್ಕೆ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಆಂಬುಲೆನ್ಸ್ ಜೊತೆಗೆ ತಾಂಡಾಕ್ಕೆ ತೆರಳಿದ್ದರು.

ಆದರೆ ಬಂದ ಅಧಿಕಾರಿಗಳನ್ನು ಕಂಡು ಆಕ್ರೋಶಗೊಂಡ ಸಂಬಂಧಿಕರು, ನಮ್ಮಲ್ಲಿ ಯಾರಿಗೂ ಬಂದಿಲ್ಲಾ ಹುಷಾರಾಗಿದ್ದಾರೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಆಂಬುಲೆನ್ಸ್ ಸೇರಿದಂತೆ, ವೈದ್ಯರ ಮೇಲೆ ಹಾಗೂ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಕಲ್ಲು ತೂರಾಟದ ಹಿನ್ನಲೆ ವಾಹನಗಳನ್ನು ಬಿಟ್ಟು  ಅಧಿಕಾರಿಗಳು ಪರಾರಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next