Advertisement

ಶಿಕ್ಷಕನಿಂದ ಹಲ್ಲೆ ಆರೋಪ,ದೃಶ್ಯ ವೈರಲ್‌

10:59 AM Feb 09, 2018 | Team Udayavani |

ಪುಂಜಾಲಕಟ್ಟೆ: ಬಾಲಕಿಗೆ ಶಿಕ್ಷಕ  ಹಲ್ಲೆ ನಡೆಸಿದ್ದೆಂಬ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ  ಫೋಟೋ ಸಹಿತ  ಆರೋಪ ವೈರಲ್‌ ಆದ ಘಟನೆ ಗುರುವಾರ ಸಂಭವಿಸಿದೆ.

Advertisement

ಕಾವಳಮೂಡೂರು ಗ್ರಾಮದ ನೆಲ್ಲಿಗುಡ್ಡೆಯ ಮದ್ರಸದ ಧರ್ಮ ಗುರು 9ರ ಹರೆಯದ ವಿದ್ಯಾರ್ಥಿನಿಗೆ ಹಲ್ಲೆ ನಡೆಸಿದ್ದಾರೆಂಬ  ಆರೋಪ ವಾಟ್ಸಾಪ್‌ನಲ್ಲಿ ಪ್ರಸಾರವಾಗಿದ್ದು,  ಸಾರ್ವಜನಿಕರಿಂದ  ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸುದ್ದಿ ತಿಳಿದ ಪುಂಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ. ಆದರೆ ಬಾಲಕಿಯ ಮನೆಯವರು ಹಲ್ಲೆ ನಡೆಸಿರುವುದನ್ನು ಅಲ್ಲಗೆಳೆದಿದ್ದಾರೆ. ಬಾಲಕಿ ಮದ್ರಸಕ್ಕೆ ಗೈರು ಹಾಜರಾಗಿರುವುದಕ್ಕೆ ಶಿಕ್ಷಕ ಕಿವಿ ಹಿಂಡಿ ಗದರಿಸಿದ್ದರು. ಈ  ಬಗ್ಗೆ  ಅವರಲ್ಲಿ ಮಾತುಕತೆ ನಡೆಸಲಾಗಿದೆ. ಆದರೆ  ವಾಟ್ಸಾಪ್‌ನಲ್ಲಿ ಇರುವ ಫೋಟೋ ತನ್ನ ಮಗಳದ್ದಲ್ಲ ಎಂದು ಬಾಲಕಿಯ ತಂದೆ ಸುಲೈಮಾನ್‌ ಅವರು ಹೇಳಿದ್ದಾರೆಂದು ಪುಂಜಾಲಕಟ್ಟೆ ಠಾಣಾಧಿಕಾರಿ ರಾಮ ನಾಯ್ಕ  ತಿಳಿಸಿದ್ದಾರೆ. ತನಿಖೆ ವೇಳೆ ಧರ್ಮಗುರು ಅಬ್ದುಲ್‌ ಕರೀಂ ಸ್ಥಳದಲ್ಲಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next