Advertisement

ಎಎಸ್‌ಐ ಕೊಲೆ ಯತ್ನ: ಇಬ್ಬರ ಬಂಧನ

08:25 AM Jul 23, 2017 | Team Udayavani |

ಪಣಂಬೂರು: ಆರೋಪಿಗಳ ಪತ್ತೆಗೆ ತೆರಳಿದ್ದ ಎಎಸ್‌ಐ ಪುರಂದರ ಗೌಡ ಮತ್ತು ಹೆಡ್‌ ಕಾನ್‌ಸ್ಟೆಬಲ್‌ ಸತೀಶ್‌ ಅವರ ಮೇಲೆ ಕಾರು ಚಲಾಯಿಸಿ ಕೊಲೆಗೆ ಯತ್ನಿಸಿದ ಕಸಬ ಬೆಂಗ್ರೆಯ ಹ್ಯಾರಿಸ್‌ ಯಾನೆ ಚಂದು ಹ್ಯಾರಿಸ್‌
(26), ಮತ್ತು ಮೊಯಿದೀನ್‌ ಆದಿಲ್‌(20)ನನ್ನು ಪಣಂಬೂರು  ಸಿಐ ರಫೀಕ್‌ ಹಾಗೂ ಸಿಬಂದಿ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ, ಬಜಪೆ ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕೊಲೆಯತ್ನ ಕೃತ್ಯಕ್ಕೆ ಬಳಸಿದ ಕಾರು, ಹಾಗೂ ಕದ್ದ 7 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಶುಕ್ರವಾರ ರಾತ್ರಿ  ಕುದುರೆಮುಖ ಕಂಪೆನಿ ಬಳಿ ಇರುವ ವೃತ್ತ ಸಮೀಪ ತಪಾಸಣೆ ನಿರತ ಪೊಲೀಸರನ್ನು ಕಂಡು ಸುರತ್ಕಲ್‌ ಕಡೆ ಬೈಕ್‌ನಲ್ಲಿದ್ದ  ಹೋಗುತ್ತಿದ್ದ ಆರೋಪಿಗಳು ಪರಾರಿಯಾಗಲು ಯತ್ನಿಸಿದಾಗ ಬಂಧಿ ಸಲಾಯಿತು. ಬಂಟ್ವಾಳ, ಮಂಗಳೂರು ನಗರ ಉತ್ತರ, ದಕ್ಷಿಣ, ಸುರತ್ಕಲ್‌ ಠಾಣೆಗಳಲ್ಲಿ ಒಟ್ಟು 7 ಪ್ರಕರಣ ದಾಖಲಾಗಿದ್ದು 25,000 ರೂ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ  ಪಣಂಬೂರು 3, ಮಂಗಳೂರು ದಕ್ಷಿಣ 10, ಸುರತ್ಕಲ್‌ 2, ಬಕೆ 2, ಮಂಗಳೂರು ಉತ್ತರ 3 ಹೀಗೆ 20ಕ್ಕೂ ಮಿಕ್ಕಿ ಕೇಸು ದಾಖಲಾಗಿದ್ದು ಇದರಲ್ಲಿ 1 ತನಿಖೆ, 7 ಖುಲಾಸೆ, 1ರಲ್ಲಿ ಶಿಕ್ಷೆ, 11 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ತಲೆ ಮರೆಸಿಕೊಂಡ ಪರಿಣಾಮ ಜಾಮೀನು ರಹಿತ ವಾರಂಟ್‌ ಹೊರಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next