Advertisement

ಗ್ರೆನೇಡ್‌ ದಾಳಿ: 11 ಮಂದಿಗೆ ಗಂಭೀರ ಗಾಯ; ಗುವಾಹಟಿಯಲ್ಲಿ ಹೈ ಅಲರ್ಟ್‌

09:02 AM May 17, 2019 | Team Udayavani |

ಗುವಾಹಟಿ: ನಗರದ ಝೂ ರಸ್ತೆಯಲ್ಲಿರುವ ಸೆಂಟ್ರಲ್‌ ಮಾಲ್‌ ಬಳಿ ಬುಧವಾರ ರಾತ್ರಿ 8 ಗಂಟೆಯ ವೇಳೆಗೆ ಮೋಟಾರ್‌ ಬೈಕ್‌ನಲ್ಲಿ ಬಂದ ಉಲ್ಫಾ ಉಗ್ರನೊಬ್ಬ ಗ್ರೆನೇಡ್‌ ಎಸೆದು ಪರಾರಿಯಾಗಿದ್ದಾನೆ. ದಾಳಿಯಲ್ಲಿ ಮಗು ಸೇರಿ 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಗಾಯಾಳುಗಳಲ್ಲಿ ಇಬ್ಬರು ಶಸಸ್ತ್ರ ಸೀಮಾ ಬಲದ ಜವಾನರು ಸೇರಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ದಾಳಿಯ ಹೊಣೆಯನ್ನು ಪರೇಶ್‌ ಬರುಹಾ ನಾಯಕತ್ವದ ಉಲ್ಫಾ ಸ್ವಾಧೀನ್‌ ಉಗ್ರ ಸಂಘಟನೆ ಹೊತ್ತುಕೊಂಡಿದೆ.

ಘಟನೆ ಬಳಿಕ ಗುವಾಹಟಿಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಅವರು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್‌ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next