Advertisement

Assam:ಕೊನೆಯುಸಿರೆಳೆದಿದೆ ಎಂದು ಘೋಷಿಸಿದ ವೈದ್ಯ…ಅಂತ್ಯ ಸಂಸ್ಕಾರದ ವೇಳೆ ಮಗು ಜೀವಂತ!

10:34 AM Oct 05, 2023 | Team Udayavani |

ಸಿಲ್ಚಾರ್(ಅಸ್ಸಾಂ): ಅಸ್ಸಾಂನ ಸಿಲ್ಚಾರ್‌ ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ್ದ ನವಜಾತ ಶಿಶು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು. ಆದರೆ ಪವಾಡ ಎಂಬಂತೆ ನವಜಾತ ಶಿಶುವಿನ ಅಂತ್ಯಕ್ರಿಯೆ ನಡೆಸುವ ಕೆಲವೇ ಕ್ಷಣದ ಮೊದಲು ಮಗು ಜೀವಂತವಾಗಿರುವ ಘಟನೆ ನಡೆದಿದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Kadaba: ನಾಪತ್ತೆಯಾಗಿದ್ದ ವ್ಯಕ್ತಿ ಅಸ್ವಸ್ಥರಾಗಿ ಪತ್ತೆ; ಮಂಗಳೂರಿನ ಆಸ್ಪತ್ರೆಯಲ್ಲಿ ಮೃತ್ಯು

ಏನಿದು ಘಟನೆ:

ನವಜಾತ ಶಿಶುವಿನ ತಂದೆ ರತನ್‌ ದಾಸ್‌ ಅವರ ಹೇಳಿಕೆ ಪ್ರಕಾರ, ಆರು ತಿಂಗಳ ಗರ್ಭಿಣಿ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದರು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಇದು ತುಂಬಾ ಜಟಿಲ ಸಮಸ್ಯೆಯಾಗಿದ್ದು, ನಮಗೆ ಒಂದೋ ತಾಯಿಯನ್ನು ಇಲ್ಲವೇ ಮಗುವನ್ನು ಮಾತ್ರ ಬದುಕಿಸಲು ಸಾಧ್ಯ ಎಂದು ತಿಳಿಸಿದ್ದರು.

ಅದರಂತೆ ನಾವು ವೈದ್ಯರಿಗೆ ಅನುಮತಿ ನೀಡಿದ್ದು, ಡೆಲಿವರಿ ಮಾಡಿದ್ದು, ನಿಮ್ಮ ಪತ್ನಿ ಅವಧಿ ಪೂರ್ವ ಮಗುವಿಗೆ ಜನ್ಮ ನೀಡಿದ್ದು, ಮಗು ಕೊನೆಯುಸಿರೆಳೆದಿರುವುದಾಗಿ ಹೇಳಿ, ಬುಧವಾರ ಬೆಳಗ್ಗೆ ನವಜಾತ ಶಿಶುವಿನ ಶವವನ್ನು ಒಪ್ಪಿಸಿದ್ದರು ಎಂದು ದಾಸ್‌ ತಿಳಿಸಿದ್ದಾರೆ.

Advertisement

ಮಗುವಿನ ಶವವನ್ನು ಪ್ಯಾಕ್‌ ಮಾಡಿ ಕೊಟ್ಟಿದ್ದು, ನಂತರ ನಾವು ಶವ ಸಂಸ್ಕಾರ ಮಾಡಲು ಸ್ಮಶಾನಕ್ಕೆ ತೆರಳಿದ್ದೇವು. ನಾವು ಸಿಲ್ಚಾರ್‌ ನ ಸ್ಮಶಾನಕ್ಕೆ ಹೋಗಿ ಅಂತಿಮ ವಿಧಿವಿಧಾನ ನಡೆಸಲು ಪ್ಯಾಕ್‌ ಅನ್ನು ತೆರೆದಾಗ…ನನ್ನ ಮಗು ಅಳಲು ಪ್ರಾರಂಭಿಸಿತ್ತು. ಕೂಡಲೇ ಮಗುವನ್ನು ಆಸ್ಪತ್ರೆಗೆ ತಂದು ದಾಖಲಿಸಿದ್ದು, ಇದೀಗ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ದಾಸ್‌ ವಿವರಿಸಿದ್ದಾರೆ.

ಈ ವಿಷಯ ಹಬ್ಬುತ್ತಿದ್ದಂತೆಯೇ ಸಿಲ್ಚಾರ್‌ ನ ಖಾಸಗಿ ಆಸ್ಪತ್ರೆಯ ವಿರುದ್ಧ ಪ್ರತಿಭಟನೆ ನಡೆಸಿ, ಬೇಜವಾಬ್ದಾರಿ ವೈದ್ಯರು ಮತ್ತು ಸಿಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ನಿರ್ಲಕ್ಷ್ಯಕದ ವಿರುದ್ಧ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಎಫ್‌ ಐಆರ್‌ ದಾಖಲಾಗಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next