Advertisement

ಉತ್ತರಪ್ರದೇಶ ಆಯ್ತು ಈಗ ಅಸ್ಸಾಂನಲ್ಲೂ ತಬ್ಲಿಘಿ ಕಿರಿಕ್: ಕ್ವಾರಂಟೈನ್ ವಾರ್ಡ್ ತುಂಬಾ ಎಂಜಲು!

09:05 AM Apr 05, 2020 | Nagendra Trasi |

ಗುವಾಹಟಿ: ಶಂಕಿತ ಕೋವಿಡ್ 19 ಸೋಂಕಿತ ಹಲವು ಜನರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗಿದ್ದು, ಇವರು ಕ್ವಾರಂಟೈನ್ ವಾರ್ಡ್ ಒಳಗೆ ಎಲ್ಲೆಂದರಲ್ಲಿ ಉಗುಳುವುದು ಹಾಗೂ ಕಿಟಕಿ ಮೂಲಕ ಹೊರಗೆ ಉಗುಳುತ್ತಿದ್ದಾರೆ ಎಂದು ಅಧಿಕಾರಿಗಳು
ಆರೋಪಿಸಿದ್ದಾರೆ.

Advertisement

ಆರೋಗ್ಯ ಸಚಿವ ಹಿಮಂತ್ ಬಿಸ್ವಾ ಶರ್ಮಾ ಆಸ್ಪತ್ರೆಗೆ ಭೇಟಿ ನೀಡುವ ಮೊದಲು ಈ ಘಟನೆ ನಡೆದಿದೆ ಎಂದು ದೂರಲಾಗಿದೆ. ಕೋವಿಡ್ 19 ಸೋಂಕು ಪೀಡಿತ ಎಂಟು ಮಂದಿಯನ್ನು ನೇರವಾಗಿ ಸಂಪರ್ಕಿಸಿದ್ದ 42 ಜನರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ.

ಎಂಟು ಮಂದಿ ದಿಲ್ಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ವರದಿ ವಿವರಿಸಿದೆ.ಕೋವಿಡ್ ಸೋಂಕಿತ ರೋಗಿಗಳು ವೈದ್ಯ ಸಿಬ್ಬಂದಿಗಳ ಮೇಲೂ ಉಗುಳಲು ಯತ್ನಿಸಿರುವುದಾಗಿ ಗೋಲಾಘಾಟ್ ಅಧಿಕಾರಿಗಳು
ಆರೋಪಿಸಿದ್ದಾರೆ.

ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ಸಾದ ನಾಲ್ವರನ್ನು ಪರೀಕ್ಷೆಗೊಳಪಡಿಸಿದ್ದು, ಕೋವಿಡ್ 19 ವೈರಸ್ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಅಸ್ಸಾಂನಲ್ಲಿ ಕೋವಿಡ್ ಸೋಂಕು ಪೀಡಿತರ ಸಂಖ್ಯೆ 20ಕ್ಕೆ ಏರಿದಂತಾಗಿದೆ. ಅಸ್ಸಾಂನ ಎಲ್ಲಾ ರೋಗಿಗಳು ಒಂದೋ ನಿಜಾಮುದ್ದೀನ್ ಮರ್ಕಝ್ ನಲ್ಲಿ ಉಳಿದುಕೊಂಡವರು ಅಥವಾ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಎಂದು ತಿಳಿಸಿದೆ.

ಕಿಟಕಿ ಮೂಲಕ ಹೊರಗೆ ಉಗುಳುತ್ತಿರುವುದು ತುಂಬಾ ನೋವು ತಂದಿದೆ. ರೋಗಿಗಳಿಗೆ ಈ ಬಗ್ಗೆ ಅರಿವು ಇದೆ. ಅಲ್ಲದೇ ಸಮಾಜ ಕೂಡಾ ಕೋವಿಡ್ 19 ರೋಗಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಬಾರದು ಎಂದು ಶರ್ಮಾ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next