Advertisement

Defamation Case ; ರಾಹುಲ್‌ ಗಾಂಧಿಗೆ ಮತ್ತೊಂದು ಸಂಕಷ್ಟ

10:57 PM Apr 09, 2023 | Team Udayavani |

ಗುವಾಹಾಟಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿ­ಸುವುದಾಗಿ ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

Advertisement

ಕಾಂಗ್ರೆಸ್‌ ತೊರೆದಿರುವ ಗುಲಾಂ ನಬಿ ಆಜಾದ್‌, ಜ್ಯೋತಿರಾದಿತ್ಯ ಸಿಂಧ್ಯಾ, ಹಿಮಂತ್‌, ಕಿರಣ್‌ ರೆಡ್ಡಿ, ಅನಿಲ್‌ ಆ್ಯಂಟನಿ ಅವರ ಹೆಸರನ್ನು ಅದಾನಿ ಹೆಸರಿನೊಂದಿಗೆ ಚಿತ್ರಿಸಿ ಅದನ್ನೇ ರಾಹುಲ್‌ ಪೋಸ್ಟ್‌ ಮಾಡಿದ್ದು, ಅದಾನಿ ಕಂಪೆನಿಯ ಲ್ಲಿರುವ 2 ಸಾವಿರ ಕೋಟಿ ಬೇನಾಮಿ ಹಣ ಯಾರದ್ದು ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಹಿಮಾಂತ, “ರಾಹುಲ್‌ ವಿರುದ್ಧ ಶೀಘ್ರದಲ್ಲೇ ಮಾನಹಾನಿ ಪ್ರಕರಣ ದಾಖಲಿಸುತ್ತೇನೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next