Advertisement
ಏತನ್ಮಧ್ಯೆ, ಶುಕ್ರವಾರ ರಾತ್ರಿ ನಡೆದ ಬೆಳವಣಿಗೆಯಲ್ಲಿ ರಾಜಸ್ಥಾನ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್, 124 ನ್ಯಾಯಾಧೀಶರ ಸಾಮೂಹಿಕ ವರ್ಗಾ ವಣೆ ಆದೇಶ ಹೊರಡಿಸಿದ್ದು, ಸಲ್ಮಾನ್ ಜಾಮೀನು ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ಜೋಷಿ ಕೂಡ ವರ್ಗಾವಣೆಗೊಂಡಿದ್ದಾರೆ.
1998ರ ಅಕ್ಟೋಬರ್ 1ರ ಮಧ್ಯರಾತ್ರಿ ಸಲ್ಮಾನ್ ಅವರಿಂದ ಹತ್ಯೆಯಾಗಿವೆ ಎನ್ನಲಾಗಿರುವ ಎರಡು ಕೃಷ್ಣಮೃಗಗಳ 2ನೇ ಮರಣೋತ್ತರ ಪರೀಕ್ಷೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದಲ್ಲಿ ಸಲ್ಮಾನ್ ಖಾನ್ ಪರವಾಗಿ ವಾದ ಮಂಡಿಸಿದ್ದ ವಕೀಲ ಮಹೇಶ್ ಬೋರಾ, ಅನುಮಾನದ ಮೇಲೆ ಸಲ್ಮಾನ್ ಖಾನ್ ಮೇಲೆ ಕೇಸ್ ಜಡಿಯಲಾಗಿದೆ ಎಂದು ವಾದಿಸಿದ್ದರು. ಆದರೆ, ಮರಣೋತ್ತರ ಪರೀಕ್ಷಾ ವರದಿಯಲ್ಲಿ ಕೃಷ್ಣಮೃಗಗಳು ಗುಂಡೇಟಿನಿಂದಲೇ ಸತ್ತಿರುವುದು ಖಾತ್ರಿಯಾಗಿದೆ ಎಂದ ನ್ಯಾಯಾಧೀಶರು, ಬೋರಾ ವಾದವನ್ನು ತಳ್ಳಿಹಾಕಿದರು.