Advertisement

ಪ್ರಶ್ನೆಗಳನ್ನು ಗೋಡೆಗೆ ಕೇಳಬೇಕೆ?: ಪಾಟೀಲ್‌

11:39 PM Mar 04, 2020 | Team Udayavani |

ವಿಧಾನ ಪರಿಷತ್‌: ಸದನದ ನಿಯಮದಂತೆ ನಿರ್ದಿಷ್ಟ ಸಂಖ್ಯೆಯಲ್ಲಿ ಸಚಿವರು, ಅಧಿಕಾರಿಗಳು ಹಾಜರಿಲ್ಲದಿದ್ದಾಗ ಯಾವ ಪುರುಷಾರ್ಥಕ್ಕಾಗಿ ಅಧಿವೇಶನ ನಡೆಸಬೇಕು ಮತ್ತು ನಾವು ಪ್ರಶ್ನೆಗಳನ್ನು ಗೋಡೆಗೆ ಕೇಳಬೇಕೇ ಎಂದು ಪರಿಷತ್‌ನ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ್‌ ಅವರು ಸರ್ಕಾರವನ್ನು ಪ್ರಶ್ನಿಸಿದರು. ಬುಧವಾರ ಮಧ್ಯಾಹ್ನ ಭೋಜನ ವಿರಾಮ ಬಳಿಕ ಸದನ ಪ್ರಾರಂಭವಾಗುತ್ತಿದ್ದಂತೆ, ಸಚಿವರು ಮತ್ತು ಮತ್ತು ಅಧಿಕಾರಿಗಳ ಗ್ಯಾಲರಿಯ ಮೊದಲ ಸಾಲಿನಲ್ಲಿ ಯಾರೂ ಇರಲಿಲ್ಲ.

Advertisement

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಎಸ್‌.ಆರ್‌.ಪಾಟೀಲ್‌, ಅಧಿಕಾರಿಗಳು, ಸಚಿವರು ಇಲ್ಲದಿದ್ದಲ್ಲಿ ಗೋಡೆಗಳನ್ನು ಪ್ರಶ್ನೆ ಮಾಡಬೇಕೆ?. ಸಚಿವರು ಮತ್ತು ಅಧಿಕಾರಿಗಳು ಬರುವವರೆಗಾದರೂ ಕಲಾಪ ಮುಂದೂಡಿ ಎಂದು ಆಗ್ರಹಿಸಿದರು. ಇದಕ್ಕೆ ಕಾಂಗ್ರೆಸ್‌ ಸದಸ್ಯರು ಧ್ವನಿಗೂಡಿಸಿದರು. ಸಭಾ ನಾಯಕ ಕೋಟಶ್ರೀನಿವಾಸ ಪೂಜಾರಿಯವರು ಇದಕ್ಕೆ ಸಮಜಾಯಿಸಿ ನೀಡುತ್ತಿದ್ದಂತೆ ಸಚಿವ ಆನಂದ್‌ ಸಿಂಗ್‌ ಆಗಮಿಸಿದರು. ಬಳಿಕ ಕೆಲವು ಅಧಿಕಾರಿಗಳು ಬಂದರು. ಕಲಾಪ ಮುಂದುವರಿಯಿತು.

Advertisement

Udayavani is now on Telegram. Click here to join our channel and stay updated with the latest news.

Next