Advertisement

Rajkot; ದಿಢೀರನೇ ಚೆನ್ನೈಗೆ ಮರಳಿದ ಅಶ್ವಿ‌ನ್‌:ಉಳಿದೆರಡು ಪಂದ್ಯಗಳಲ್ಲೂ ಆಡುವುದು ಅನುಮಾನ

11:13 PM Feb 17, 2024 | Team Udayavani |

ರಾಜಕೋಟ್: ತಾಯಿಯ ಅನಾರೋಗ್ಯದಿಂದ ದಿಢೀರನೇ ಚೆನ್ನೈಗೆ ಮರಳಿದ ಆರ್‌. ಅಶ್ವಿ‌ನ್‌ ರಾಜ್‌ಕೋಟ್‌ ಟೆಸ್ಟ್‌ ಪಂದ್ಯದಿಂದ ಬೇರ್ಪಟಿದ್ದಾರೆ. ಭಾರತಕ್ಕೆ ಇದು ಭಾರೀ ಹಿನ್ನಡೆಯಾಗಿ ಕಾಡಬಹುದು. ಒಂದು ಮೂಲದ ಪ್ರಕಾರ ಅಶ್ವಿ‌ನ್‌ ಉಳಿದೆರಡು ಟೆಸ್ಟ್‌ ಪಂದ್ಯಗಳಲ್ಲೂ ಆಡುವುದು ಅನುಮಾನ.

Advertisement

ಅಶ್ವಿ‌ನ್‌ ಬದಲು ದೇವದತ್ತ ಪಡಿಕ್ಕಲ್‌ ಫೀಲ್ಡಿಂಗ್‌ ನಡೆಸಿದರು. ಆದರೆ ಅಶ್ವಿ‌ನ್‌ಗೆ ಬದಲಿಯಾಗಿ ಆಡುವ ಬಳಗಕ್ಕೆ ಆಟಗಾರನನ್ನು ಸೇರಿಸಿಕೊಳ್ಳುವ ಅವಕಾಶವಿಲ್ಲ. ಹೀಗಾಗಿ ಭಾರತ ಹತ್ತೇ ಜನರನ್ನು ನೆಚ್ಚಿಕೊಳ್ಳಬೇಕಿದೆ. ಆಟಗಾರನೊಬ್ಬ ಅಂಗಳದಲ್ಲಿ ತಲೆಗೆ ಏಟು ಅನುಭವಿಸಿ ಹೊರಬಿದ್ದ ಸಂದರ್ಭದಲ್ಲಷ್ಟೇ ಬದಲಿ ಆಟಗಾರನನ್ನು ಆಡಿಸಬಹುದಾಗಿದೆ.

ಇಲ್ಲಿ ಇನ್ನೊಂದು ಸಾಧ್ಯತೆಯೂ ಇದೆ. ಎಂಸಿಸಿ ನಿಯಮ 1.2.2ರ ಪ್ರಕಾರ ಎದುರಾಳಿ ನಾಯಕ ಒಪ್ಪಿದರೆ ಬದಲಿ ಆಟಗಾರನನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳಬಹುದು. ಇಲ್ಲಿ ಬೆನ್‌ ಸ್ಟೋಕ್ಸ್‌ ಅವರ ಒಪ್ಪಿಗೆಯ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next