Advertisement

ಕೇರಳದಲ್ಲಿ ಅಧಿಕಾರದ ವಿಶ್ವಾಸವಿರಲಿಲ್ಲ ಅದಕ್ಕೆ ಶ್ರೀಧರನ್ ರನ್ನು CM ಅಭ್ಯರ್ಥಿ ಮಾಡಲಾಗಿತ್ತು

01:30 PM Aug 02, 2021 | Team Udayavani |

ಬೆಂಗಳೂರು: ಕೇರಳದಲ್ಲಿ ನಮಗೆ ಅಧಿಕಾರಕ್ಕೆ ಬರುವ ವಿಶ್ವಾಸ ಇರಲಿಲ್ಲ. ರಾಜಕೀಯ ಕಾರಣಕ್ಕಾಗಿ ಅಲ್ಲಿ ಶ್ರೀಧರನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಣೆ ಮಾಡಲಾಗಿತ್ತು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದರು. ಅದಕ್ಕೆ ಸರ್ಕಾರ ಉತ್ತರ ಕೊಟ್ಟ ನಂತರ ಅಧಿವೇಶನದಲ್ಲಿ ದಾಖಲೆ ಸಮೇತ ಚರ್ಚೆ ಮಾಡದೆ ಅನಗತ್ಯ ಆರೋಪ ಮಾಡುವ ಚಾಳಿ ಶುರು ಮಾಡಿಕೊಂಡಿದ್ದಾರೆ ಎಂದರು.

ಯಡಿಯೂರಪ್ಪ ಅವರು ರಾಜಿನಾಮೆ ಕೊಟ್ಟ ನಂತರ ಆರೋಪ ಮಾಡುವ ಹೊಸ ಚಾಳಿ ಶುರು ಮಾಡಿಕೊಂಡಿದ್ದಾರೆ. ಯಡಿಯೂರಪ್ಪ ಅವರನ್ನು ಯಾಕೆ ಕೈ ಬಿಟ್ಟರು ಎಂದು ಕೇಳುತ್ತಿದ್ದಾರೆ. ಶಾಮನೂರು ಶಿವಶಂಕರಪ್ಪ, ಅಂಬರೀಶ್, ಜನಾರ್ಧನ ಪೂಜಾರಿ ಅವರನ್ನು ಏನು ಮಾಡಿದ್ದೀರಿ ಎಂದು ಯಾಕೆ ಹೇಳಿಲ್ಲ. ಅವುಗಳನ್ನು ನಿಮ್ಮ ಉಸ್ತುವಾರಿಗೆ ಎಲ್ಲ ತಿಳಿಸಿ ಎಂದು ಟೀಕಿಸಿದರು.

ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆಯಾಗಿ ಒಂದು ವರ್ಷವಾಯಿತು. ನಿಮ್ಮಿಂದ ನಿಮ್ಮ ಶಾಸಕರಿಗೆ ನ್ಯಾಯ ಕೊಡಿಸಲು ಆಗಿಲ್ಲ. ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡುವ ಬದಲು ನಿಮ್ಮ ಗೊಂದಲ ಬಗೆಹರಿಸಿಕೊಳ್ಳಿ. ಕೇಂದ್ರ ಸರ್ಕಾರ ಯಶಸ್ವಿಯಾಗಿ ಏಳು. ವರ್ಷ ಪೂರೈಸಿದೆ. ಸಂಸತ್ತು ನಡೆಯಲು ಅವಕಾಶ ಕೊಡದೆ ದೇಶದಲ್ಲಿ ಗೊಂದಲ ಸೃಷ್ಡಿಸುತ್ತಿದ್ದೀರಿ ಎಂದು ಟೀಕಿಸಿದರು.

ಇದನ್ನೂ ಓದಿ:ಇಂದೂ ಮುಂದುವರಿಯಲಿದೆ ಸಂಪುಟ ಸರ್ಕಸ್: 15 ಶಾಸಕರಿಗೆ ಮಾತ್ರ ಅವಕಾಶ? ಹಿರಿಯರಿಗೆ ಕೊಕ್?

Advertisement

ಬಸವರಾಜ್ ಬೊಮ್ಮಾಯಿ ಕ್ಲೀನ್ ಇಮೇಜ್ ಇರುವ ನಾಯಕ. ಜನತಾ ಪರಿವಾರದಿಂದ ಬಂದಿದ್ದಾರೆ. ಗೃಹ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಶೀಘ್ರ ಸಂಪುಟ ರಚನೆಯಾಗುತ್ತದೆ. ನಮ್ಮ ಪಕ್ಷದ ಬಗ್ಗೆ ಅನಗತ್ಯ ಹೇಳಿಕೆ ನೀಡದೆ ಸರ್ಕಾರದ ತಪ್ಪುಗಳಿದ್ದರೆ ಆರೋಪ ಮಾಡಿ ಸರಿಪಡಿಕೊಳ್ಳಲು ಸಹಾಯ ಮಾಡಿ. ಅದನ್ನು ಬಿಟ್ಟು ಅನಗತ್ಯ ಆರೋಪ ಮಾಡುವುದನ್ನು ನಿಲ್ಲಿಸಿ ಎಂದು ಅಶ್ವಥ್ ನಾರಾಯಣ ಹೇಳಿದರು.

ಗಣೇಶ್ ಕಾರ್ಣಿಕ್ ಮಾತನಾಡಿ, ಕಾಂಗ್ರೆಸ್ ನಲ್ಲಿ ಆಚಾರವಿಲ್ಲದ ನಾಲಿಗೆ ಎನ್ನುವಂತೆ ಕೆಲವು ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ವಲ್ಲಭಭಾಯಿ ಪಟೇಲ್, ಅಂಬೇಡ್ಕರ್, ಪಿ.ವಿ. ನರಸಿಂಹ ರಾವ್ ಅವರನ್ನು ಹೇಗೆ ನಡೆಸಿಕೊಂಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನರಸಿಂಹ ರಾವ್ ಅವರ ಜನ್ಮ ಶತಾಬ್ದಿಯನ್ನು ಸೌಜನ್ಯಕ್ಕೂ ಆಚರಿಸಲಿಲ್ಲ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next