Advertisement

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಹೋದವರು ಮರಳಿ ಬರುವ ಗ್ಯಾರಂಟಿಯಿಲ್ಲ: ಅಶೋಕ್ ನಾರ್ವೆ ಆರೋಪ

01:26 PM Jun 05, 2021 | Team Udayavani |

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಹೋದವರು ಮರಳಿ ಬರುವ ಯಾವುದದೇ ಗ್ಯಾರಂಟಿಯಿಲ್ಲ. ದಿನವೊಂದಕ್ಕೆ 15 ರಿಂದ 20 ಮಂದಿ ಸಾವನ್ನಪ್ಪುತ್ತಿದ್ದಾರೆ. ಆಸ್ಪತ್ರೆಗೆ ಹೋದ ಬಹುತೇಕ ಜನರು ಸಾಯುತ್ತಿದ್ದಾರೆ ಎಂದು ಕೊಪ್ಪ ಕಿಸಾನ್ ಘಟಕದ ಅಧ್ಯಕ್ಷ ಅಶೋಕ್ ನಾರ್ವೆ ಗಂಭೀರ ಆರೋಪ ಮಾಡಿದ್ದಾರೆ.

Advertisement

ಕೊಪ್ಪದ ಹಲವರು ಜಿಲ್ಲಾಸ್ಪತ್ರೆಗೆ ದಾಖಲಾಗಿ ಸಾವನ್ನಪ್ಪಿದ್ದಾರೆ. ಸರ್ಕಾರ, ಜಿಲ್ಲಾಡಳಿತ, ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದರು.

ಇದನ್ನೂ ಓದಿ:ಅಹಮದಾಬಾದ್ ನಲ್ಲಿ ಕೊಡಗಿನ ಯುವಕ ಆತ್ಮಹತ್ಯೆ : ಪೈಲೆಟ್ ಆಗಬೇಕೆನ್ನುವ ಕನಸು ನನಸಾಗಲೇ ಇಲ್ಲ

ಜಿಲ್ಲಾಡಳಿತ ಸರ್ಕಾರಕ್ಕೆ ಸುಳ್ಳು ದಾಖಲೆ ನೀಡುತ್ತಿದೆ. ಪ್ರತಿನಿತ್ಯ 15-20 ಜನರು ಸತ್ತರೂ ಕೇವಲ 1-2 ಎಂದು ಸುಳ್ಳು ಅಂಕಿ ಅಂಶ ನೀಡುತ್ತಿದ್ದಾರೆ. ನೀವು ನೀಡುವ ಸುಳ್ಳು ಲೆಕ್ಕದಿಂದ ಜನರು ಬೀದಿಗೆ ಬರುತ್ತಾರೆ, ಬೀದಿಗೆ ಬಂದರೆ ಮತ್ತಷ್ಟು ಸಾವು-ನೋವುಗಳು ಸಂಭವಿಸುತ್ತದೆ ಎಂದು ಜಿಲ್ಲಾಸ್ಪತ್ರೆಯ ಅವ್ಯವಸ್ಥೆಯ ವಿರುದ್ಧ ಅಶೋಕ್ ನಾರ್ವೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next