Advertisement

ರಾಯರ ಮಠದಲ್ಲಿ ಆಷಾಢ ಏಕಾದಶಿ ಪೂಜೆ

07:27 AM Jul 02, 2020 | Lakshmi GovindaRaj |

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಷಾಢ ಶುಕ್ಲ ಏಕಾದಶಿ ಪ್ರಯುಕ್ತ ಬುಧವಾರ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು.  ರಾಯರ ಮೂಲಬೃಂದಾವನ ಸೇರಿ ಮಠದ ಆವರಣದಲ್ಲಿರುವ ಯತಿಗಳ ಬೃಂದಾವನಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

Advertisement

ಮೂಲರಾಮ ದೇವರಿಗೆ ವಿಶೇಷ ಪೂಜೆ, ಶ್ರೀಗುರು ಸಾರ್ವಭೌಮರ ಮೂಲ ಬೃಂದಾವನಕ್ಕೆ ವಿಶೇಷ  ಮಂಗಳಾರತಿ ನೆರವೇರಿಸಿದರು. ಬಳಿಕ ಮಠದಲ್ಲಿ ಸುದರ್ಶನ ಹೋಮ ಜರುಗಿಸಿ ಮುದ್ರಾಧಾರಣೆ ಮಾಡಿಕೊಂಡರು. ಈ ವೇಳೆ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಭಕ್ತರು ಕೋವಿಡ್‌ 19 ವೈರಸ್‌ನಿಂದ ಜಾಗೃತಿ ವಹಿಸಬೇಕು. ಈ ಬಾರಿ  ನೇರವಾಗಿ ಮುದ್ರಾಧಾರಣೆ ಮಾಡಲು ಆಗಿಲ್ಲ.

ರಾಯರ ಪೂಜಾ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳಲ್ಲೇ ಕಣ್ತುಂಬಿಕೊಳ್ಳಬೇಕು ಎಂದರು. ಈ ವೇಳೆ ಮಠದ ಪಂಡಿತರು, ವಿದ್ವಾಂಸರು, ಶಿಷ್ಯರು, ಅಧಿಕಾರಿ, ಸಿಬ್ಬಂದಿ  ವರ್ಗದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next