Advertisement

“ಆಶಾ ಸಂರಕ್ಷಣಾ ದಿನ’ಘೋಷಣೆಗೆ ಒತ್ತಾಯ

02:37 PM May 30, 2020 | Suhan S |

ಗದಗ: ಕೋವಿಡ್‌-19 ಸೋಂಕು ತಡೆಗಟ್ಟುವಲ್ಲಿ ಅವಿರತ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರ ಗೌರವಾರ್ಥವಾಗಿ ಪ್ರತಿವರ್ಷ ಮೇ 29ರಂದು ಆಶಾ ಸಂರಕ್ಷಣಾ ದಿನ ಆಚರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಯುಟಿಯುಸಿ ಸಂಯೋಜಿತ ಆಶಾ ಕಾರ್ಯಕರ್ತೆಯರ ಸಂಘ ಒತ್ತಾಯಿಸಿದೆ.

Advertisement

ಈ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಜಿಲ್ಲಾ ಧಿಕಾರಿಗಳಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿ, ರಾಜ್ಯದಲ್ಲಿ ಮಹಾಮಾರಿ ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ಆಶಾ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಿದ್ದಾರೆ. ಸೀಲ್‌ ಡೌನ್‌, ಲಾಕ್‌ಡೌನ್‌ ಮಧ್ಯೆಯೂ ಆಶಾ ಕಾರ್ಯಕರ್ತೆಯರು ತಮ್ಮ ಜೀವವನ್ನು ಪಣಕ್ಕಿಟ್ಟು, ಕಾರ್ಯನಿರ್ವಹಿಸಿದ್ದಾರೆ. ಈ ವೇಳೆ ಪುಂಡರ ದಾಳಿ, ಅವಹೇಳನಗಳಿಗೂ ಜಗ್ಗದೇ ಸರಕಾರ ಮತ್ತು ಆರೋಗ್ಯ ಇಲಾಖೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಹೆಮ್ಮೆಯ ಸಂಗತಿ. ಆದರೆ, ಆರೋಗ್ಯ ಇಲಾಖೆ ಸಮೀಕ್ಷಾ ಸಂದರ್ಭದಲ್ಲಿ ಕೆಲವೊಮ್ಮೆ ಮದ್ಯವ್ಯಸನಿಗಳು ಹಾಗೂ ಪುಂಡರ ಕಾಟದಿಂದ ಆಶಾ ಕಾರ್ಯಕರ್ತೆಯರು ಜೀವವನ್ನು ಕೈಯಲ್ಲಿ ಹಿಡಿದು ಕೆಲಸ ನಿರ್ವಹಿಸುವಂತಾಗುತ್ತದೆ.

ಆಶಾ ಕಾರ್ಯಕರ್ತೆಯರ ಮೇಲೆ ದಾಳಿ ನಡೆಸುವ, ಕಿರುಕುಳ ನೀಡುವ ಕಿಡಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆಶಾ ಕಾರ್ಯಕರ್ತೆಯರ ಸೇವೆಯನ್ನು ಸಮಾಜ ಗೌರವಿಸುವಂತೆ ಮಾಡಲು ಪ್ರತೀವರ್ಷ ಮೇ 19ರಂದು “ಆಶಾ ಸಂರಕ್ಷಣಾ ದಿನ’ ಘೊಷಿಸಬೇಕು ಎಂದು ಒತ್ತಾಯಿಸಿದರು.

ಎಐಯುಟಿಯುಸಿ ಸಂಯೋಜಿತ ನಗರ ಅಧ್ಯಕ್ಷೆ ಲಕ್ಷ್ಮೀ ಪೂಜಾರ, ಕಾರ್ಯದರ್ಶಿಗಳಾದ ಅನ್ನಪೂರ್ಣ ಕಾಟ್ವಾ, ಗೌರಿ ಕಟ್ಟಿಮನಿ, ಲಲಿತಾ ಹೊಸಹಳ್ಳಿ, ಶಿಲ್ಪಾ ಪೂಜಾರ, ಗೀತಾ ಭಜಂತ್ರಿ, ಶಾಹೀನ್‌ ಪುಗ್ಗಿ, ರೇಣುಕಾ ಜವಳಿ, ಪ್ರೇಮಾ ಪಾಟೀಲ, ಬಸವಣ್ಣೆವ್ವ ಓಲೇಕಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next