Advertisement

ರಾಮ ಜನಿಸಿದ ಕೂಡಲೇ ಆ ಸ್ಥಳಕ್ಕೆ ದೈವತ್ವ ಬಂದಿದೆ

12:19 AM Aug 22, 2019 | Team Udayavani |

ಹೊಸದಿಲ್ಲಿ:“ರಾಮನು ಜನಿಸಿದ ಕೂಡಲೇ ಆ ಸ್ಥಳಕ್ಕೆ ದೈವೀ ಮಾನ್ಯತೆ ಸಿಕ್ಕಿದೆ. ಹಾಗಾಗಿ, ಅದು ಹಿಂದೂಗಳಿಗೆ ಸೇರಿದ ಜಾಗವಾಗಿದ್ದು, ಬೇರೆ ಯಾರೋ ಆ ಸ್ಥಳದ ಮೇಲೆ ಹಕ್ಕು ಸಾಧಿಸುವಂತಿಲ್ಲ’ ಎಂದು ರಾಮಲಲ್ಲಾ ಸಂಸ್ಥೆಯು ಸುಪ್ರೀಂ
ಕೋರ್ಟ್‌ನಲ್ಲಿ ವಾದ ಮಂಡಿಸಿದೆ.

Advertisement

ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ರಾಮಜನ್ಮಭೂಮಿ ವಿವಾದ ಪ್ರಕರಣದ ದಿನಂಪ್ರತಿ ವಿಚಾರಣೆ ಬುಧವಾರ 9ನೇ ದಿನಕ್ಕೆ ಕಾಲಿಟ್ಟಿತು. ದಿನದ ವಿಚಾರಣೆಯಲ್ಲಿ ಪ್ರಕರಣದ ಪ್ರತಿವಾದಿಯಾಗಿರುವ ರಾಮಲಲ್ಲಾ ಸಂಸ್ಥೆಯ ವಕೀಲರು, ರಾಮನು ಜನಿಸಿದ ಕೂಡಲೇ ಆ ಜಾಗಕ್ಕೆ ದೈವತ್ವದ ಮಾನ್ಯತೆ ಸಿಕ್ಕಂತೆಯೇ ಸರಿ. ಹಾಗಾಗಿಯೇ, ಸಹಸ್ರಾರು ವರ್ಷಗಳಿಂದ ಹಿಂದೂಗಳು ಆ ಜಾಗದಲ್ಲಿ ರಾಮನ ಆರಾಧನೆ ಮಾಡಿಕೊಂಡು ಬಂದಿದ್ದು ಅದು ಅವರ ಹಕ್ಕೂ ಆಗಿದೆ ಎಂದರು. ಇದನ್ನು ಬೆಂಬಲಿಸಿದ ರಾಮಲಲ್ಲಾ ಸಂಸ್ಥೆಯ ಮತ್ತೂಬ್ಬ ವಕೀಲ ಸಿ.ಎಸ್‌. ವೈದ್ಯನಾಥನ್‌, ದೈವತ್ವದ ಸ್ಥಳದ ಮೇಲೆ ನಿರ್ಮೋಹಿ ಅಖಾಡವಾಗಲೀ, ಯಾವುದೇ ಮುಸ್ಲಿಂ ಪಂಗಡವಾಗಲೀ ಅಧಿಕಾರ ಹೊಂದಿರುವುದಿಲ್ಲ. ಆ ಸ್ಥಳ ನಮ್ಮದು ಎಂದು ಹೇಳುವ ಹಕ್ಕು ಅವರಿಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next