Advertisement

ಎಲ್ಲಾ ಕಾಲದಲ್ಲೂ ಕೆಟ್ಟವರು ಗೆಲ್ಲಲು ಸಾಧ್ಯವಿಲ್ಲ: ಕಮಲ್ ಹಾಸನ್

04:25 PM Feb 14, 2017 | Sharanya Alva |

ಚೆನ್ನೈ: ಇದು ಈ ನೆಲದ ಕಾನೂನು. ಎಲ್ಲಾ ಕಾಲದಲ್ಲೂ ಕೆಟ್ಟವರು ಗೆಲ್ಲಲು ಸಾಧ್ಯವಿಲ್ಲ ಎಂದು ಖ್ಯಾತ ನಟ, ನಿರ್ದೇಶಕ ಕಮಲ್ ಹಾಸನ್ ಶಶಿಕಲಾ ನಟರಾಜನ್ ದೋಷಿ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಟ್ವೀಟ್ ಮಾಡಿ ವ್ಯಕ್ತಪಡಿಸಿರುವ ಅಭಿಪ್ರಾಯ ಇದು.

Advertisement

ಇದೊಂದು ಹಳೇ ಹಾಡು, ಆದರೂ ಅದು ಪ್ರಸ್ತುತವಾಗಿದೆ. ಕೆಟ್ಟವರು ಕೆಲವು ಬಾರಿ ಗೆಲ್ಲಬಹುದು,ಆದರೆ ಕಾಲ ಬದಲಾಗುತ್ತಲೇ ಇರುತ್ತದೆ. ಕೊನೆಗೂ ನ್ಯಾಯಕ್ಕೆ ಜಯ.ದೇಶದ ಕಾನೂನು ಮೇಲುಗೈ ಸಾಧಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

ತಮಿಳುನಾಡಿನ ರಾಜಕಾರಣದಲ್ಲಿ ಅಧಿಕಾರದ ಗದ್ದುಗೆ ಏರಲು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಹಾಗೂ ಹಂಗಾಮಿ ರಾಜ್ಯಪಾಲ ಪನ್ನೀರ್ ಸೆಲ್ವಂ ನಡುವೆ ನಡೆದ ಜಂಗೀಕುಸ್ತಿಯಿಂದ ರೋಸಿ ಹೋಗಿದ್ದ ನಟ ಕಮಲ್ ಹಾಸನ್ ಆರಂಭದಲ್ಲೇ ಟ್ವೀಟ್ ಮಾಡಿದ್ದರು.

ತಮಿಳುನಾಡಿನ ಜನರಿಗೆ ಇದು ಸಕಾಲ, ತಮಗೆ ಎಂತಹ ನಾಯಕ ಬೇಕು ಎಂಬುದನ್ನು ಈಗ ನಿರ್ಧರಿಸಬೇಕಾಗಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪನ್ನೀರ್ ಸೆಲ್ವಂಗೆ ಸಾಥ್ ನೀಡಿದ್ದರು. ಜಲ್ಲಿಕಟ್ಟು ವಿಚಾರದಲ್ಲಿಯೂ ಕಮಲ್ ಹಾಸನ್ ಅವರು ಟ್ವೀಟ್ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next