Advertisement

“ಹಿಮಾಲಯನ್‌ ಯೋಗಿ ಆನಂದ್‌ಗೆ’ಜಾಮೀನು ನಿರಾಕರಣೆ

09:58 PM Mar 24, 2022 | Team Udayavani |

ನವದೆಹಲಿ: ಸಿಬಿಐ ನ್ಯಾಯಾಲಯವು ಎನ್‌ಎಸ್‌ಇ ಮಾಜಿ ಜಿಒಒ (ಗ್ರೂಪ್‌ ಆಪರೇಟಿಂಗ್‌ ಆಫೀಸರ್‌) ಆನಂದ್‌ ಸುಬ್ರಹ್ಮಣಿಯನ್‌ಗೆ ಜಾಮೀನು ನೀಡಲು ನಿರಾಕರಿಸಿದೆ.

Advertisement

ಎನ್‌ಎಸ್‌ಇ ಮಾಜಿ ಮುಖ್ಯಸ್ಥೆ ಚಿತ್ರ ರಾಮಕೃಷ್ಣಾ ಅವರ ಅತ್ಯಾಪ್ತ ಆನಂದ್‌ ಎನ್ನುವುದು ಗಮನಾರ್ಹ. ತಾನು ಹಿಮಾಲಯದ ಯೋಗಿಯೊಬ್ಬರ ಸಲಹೆಯಂತೆ ಎನ್‌ಎಸ್‌ಇನಲ್ಲಿ ಎಲ್ಲ ತೀರ್ಮಾನ ಮಾಡಿದ್ದೇನೆಂದು ಚಿತ್ರಾ ಹೇಳಿಕೊಂಡಿದ್ದಾರೆ.

ಆ ಯೋಗಿ ಆನಂದ್‌ ಅವರೇ ಎನ್ನುವುದು ಸಿಬಿಐ ಆರೋಪ. ಜಾಮೀನು ನಿರಾಕರಿಸುವಾಗ ಇದನ್ನೂ ಪ್ರಸ್ತಾಪಿಸಿದ ನ್ಯಾಯಾಲಯ, ಹಿಮಾಲಯದ ಯೋಗಿ ಹಿಮಾಲಯದ ಯೇತಿಯಷ್ಟೇ ಅನಾಮಿಕನಾಗಿ ಉಳಿದುಕೊಂಡಿದ್ದಾರೆ. ಇದನ್ನು ಪತ್ತೆ ಮಾಡಲು ಸಿಬಿಐ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next