Advertisement
ಅವರು ಕೋಟತಟ್ಟು ಗ್ರಾ.ಪಂ., ಡಾ| ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ಕೋಟ ಸಾರಥ್ಯದಲ್ಲಿ, ಡಾ|ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಸಹಯೋಗದೊಂದಿಗೆ ಕೋಟ ಕಾರಂತ ಕಲಾಭವನದಲ್ಲಿ ನಡೆಯುವ ಹತ್ತುದಿನಗಳ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಅ.1ರಂದು ಚಾಲನೆ ನೀಡಿ ಮಾತನಾಡಿದರು.
ಶಿಕ್ಷಕ ವಿಠಲ್ ನಾಯಕ್ದಿಕ್ಸೂಚಿ ಭಾಷಣ ಮಾಡಿ, ಇಂದು ಶಾಲೆ-ಕಾಲೇಜು, ಮನೆ ಎಲ್ಲಾ ಕಡೆ ಮಕ್ಕಳಿಗೆ ಕೇವಲ ಓದುವುದನ್ನು ಮಾತ್ರ ಹೇಳಿಕೊಡುತ್ತಿದ್ದೇವೆ. ಆದರೆ ಅವರಿಗೆ ಜೀವನಕ್ಕೆ ಎನು ಬೇಕು. ಹೇಗೆ ಬದುಕಬೇಕು ಎನ್ನುವುದನ್ನು ಹೇಳಿಕೊಡುತ್ತಿಲ್ಲ. ಜೀವನದಲ್ಲಿ ಮಾರ್ಕ್ ಪಡೆಯುವುದು ದೊಡ್ಡ ಕೆಲಸವಲ್ಲ, ಆದರೆ ರಿಮಾರ್ಕ್ ಬಾರದ ಹಾಗೆ ಜೀವಿಸುವುದೇ ದೊಡ್ಡ ಸಾಧನೆಯಾಗಿದೆ. ಮನೆಯ ವಾತವರಣ ಸಂಸ್ಕೃತಿಯಿಂದ ಕೂಡಿದ್ದರೆ ಯುವ ಜನಾಂಗ ಸಂಸ್ಕಾರವಂತರಾಗಿ ಬಾಳು¤ತಾರೆ ಎಂದರು.
Related Articles
Advertisement
ಪ್ರತಿಷ್ಠಾನದ ಗೌರವಾಧ್ಯಕ್ಷ ಆನಂದ್ ಸಿ.ಕುಂದರ್ ಸ್ವಾಗತಿಸಿ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಾಸ್ತಾವಿಕ ಮಾತನಾಡಿ, ಪ್ರಸಾದ್ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು.