Advertisement

ಬಿವಿಟಿ ಆಡಳಿತ ಟ್ರಸ್ಟಿಯಾಗಿ ಟಿ. ಅಶೋಕ್‌ ಪೈ

10:07 AM Nov 07, 2019 | Team Udayavani |

ಉಡುಪಿ: ಮಣಿಪಾಲ ಭಾರತೀಯ ವಿಕಾಸ ಟ್ರಸ್ಟಿನ ಸಭೆಯಲ್ಲಿ ಮಣಿಪಾಲದ ಟಿ. ಅಶೋಕ್‌ ಪೈ ಅವರನ್ನು ಟ್ರಸ್ಟಿನ ಆಡಳಿತ ಟ್ರಸ್ಟಿಯಾಗಿ ಆಯ್ಕೆ ಮಾಡಲಾಯಿತು. ಬಿವಿಟಿ ಟ್ರಸ್ಟಿಗಳಾದ ಟಿ. ಅಶೋಕ್‌ ಪೈ, ಟಿ. ಸತೀಶ್‌ ಯು. ಪೈ, ಡಾ| ಹರೀಶ್‌ ಹಂದೆ, ಟಿ. ಗೌತಮ್‌ ಪೈ, ವಿಮಲಾ ಕಾಮತ್‌, ಟ್ರಸ್ಟ್‌ನ ಹಿರಿಯ ಸಲಹೆಗಾರ ಮೋಹನ್‌ ಭಾಸ್ಕರ್‌ ಹೆಗಡೆ ಉಪಸ್ಥಿತರಿದ್ದರು.

Advertisement

ಟಿ. ಅಶೋಕ್‌ ಪೈ ಅವರು ಮಾತನಾಡಿ, ಭಾರತೀಯ ವಿಕಾಸ ಟ್ರಸ್ಟ್‌ ಆಧುನಿಕ ಮಣಿಪಾಲದ ರೂವಾರಿಗಳಲ್ಲಿ ಒಬ್ಬರಾದ ದಿ| ಟಿ.ಎ. ಪೈಗಳಿಂದ ಸ್ಥಾಪಿಸಲ್ಪಟ್ಟಿದ್ದು, ಅವರ ನಿಧನದ ಬಳಿಕ ದಿ| ವಸಂತಿ ಟಿ.ಎ. ಪೈ ಮತ್ತು ಅನಂತರ ದಿ| ಕೆ.ಎಂ. ಉಡುಪ ಅವರ ನೇತೃತ್ವದಲ್ಲಿ ಸಮಾಜ ಸೇವೆಯಲ್ಲಿ ತನ್ನದೇ ಛಾಪು ಮೂಡಿಸಿದೆ. ಇದೀಗ ಬಿವಿಟಿ ಟ್ರಸ್ಟಿ “ಮ್ಯಾಗ್ಸೆಸೆ ಪ್ರಶಸ್ತಿ’ ಪುರಸ್ಕೃತ ಡಾ| ಹರೀಶ್‌ ಹಂದೆಯವರ ಸಕ್ರಿಯ ಸಹಭಾಗಿತ್ವದಲ್ಲಿ ಸಮಾಜ ಸೇವಾ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೇರಲಿದೆ ಎಂದು ಆಶಾವಾದ ವ್ಯಕ್ತಪಡಿಸಿದರು.

ಇತ್ತೀಚೆಗೆ ನಿಧನರಾದ ಆಡಳಿತ ಟ್ರಸ್ಟಿಯಾಗಿದ್ದ ಕೆ.ಎಂ. ಉಡುಪರು ಮಾಡಿದ ಅನುಪಮ ಸೇವೆಯನ್ನು ಟ್ರಸ್ಟಿನ ಸದಸ್ಯರು ಕೊಂಡಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಮಣಿಪಾಲದ ಡಾ| ಟಿ.ಎಂ.ಎ. ಪೈ ಫೌಂಡೇಶನ್‌ನ ಕಾರ್ಯದರ್ಶಿಯಾಗಿ, ಮಣಿಪಾಲದ ವಿವಿಧ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಇದೀಗ ನೂತನ ಆಡಳಿತ ಟ್ರಸ್ಟಿ ಯಾಗಿ ಪದವಿ ಸ್ವೀಕರಿಸಿದ ಟಿ. ಅಶೋಕ್‌ ಪೈ ಅವರನ್ನು ಟ್ರಸ್ಟಿಗಳು ಅಭಿನಂದಿಸಿದರು.

ಬಿವಿಟಿಯ ನೂತನ ಆಡಳಿತ ಟ್ರಸ್ಟಿ ಟಿ. ಅಶೋಕ್‌ ಪೈ ಅವರನ್ನು ಟ್ರಸ್ಟಿ ಟಿ. ಸತೀಶ್‌ ಯು. ಪೈ ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next