Advertisement

ಕಾಂಗ್ರೆಸ್ಸಿಗೆ ಹೋಲಿಸಿದ್ರೆ, ನಮ್ಮ ಪಕ್ಷ ಉತ್ತಮವಾಗಿದೆ : ಅರುಣ್ ಸಿಂಗ್

05:34 PM Mar 20, 2021 | Team Udayavani |

ಬೆಂಗಳೂರು : ತಮಿಳುನಾಡು ವಿಧಾನಸಭೆ ಚುನಾವಣೆ ರಂಗೇರಿದೆ. ಅಣ್ಣಾಮಲೈ, ಖುಷ್ಬೂ ಸೇರಿದಂತೆ ಅನೇಕರು ಸ್ಪರ್ಧೆ ಮಾಡಿದ್ದಾರೆ. ಎಐಡಿಎಂಕೆ, ಡಿಎಂಕೆ ಸೇರಿದಂತೆ ಹಲವು ಪಕ್ಷಗಳಿವೆ. ಕಾಂಗ್ರೆಸ್ಸಿಗೆ ಹೋಲಿಸಿದ್ರೆ, ನಮ್ಮ ಪಕ್ಷ ಉತ್ತಮವಾಗಿದೆ ಎಂದು ಬಿಜೆಪಿ ರಾಜ್ಯ ಕಚೇರಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ನೀಡಿದ್ದಾರೆ.

Advertisement

ಭ್ರಷ್ಟಾಚಾರ, ಗೂಂಡಾ ಪಾಲಿಟಿಕ್ಸ್ ನಡೆಯುತ್ತಿದೆ ಈ ರೀತಿ ಸರ್ಕಾರ ಬೇಡ ಅಂತ ಜನ ನಿರ್ಧರಿಸಿದ್ದಾರೆ. 234 ಕ್ಷೇತ್ರದಲ್ಲಿ ಬಿಜೆಪಿ ಸೇರಿದಂತೆ ಮೈತ್ರಿ ಅಡಿಯಲ್ಲಿ ಅಭ್ಯರ್ಥಿಗಳನ್ನು ಹಾಕಲಾಗಿದೆ. ಇದರ ಲಾಭ ಬಿಜೆಪಿಗೆ ಆಗಲಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಹೋರಾಟ ನಡೆಸುತ್ತಿದ್ದೇವೆ. 2016ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದುಬಿಟ್ಟೆವು ಅಂತ ಅಂದುಕೊಂಡಿದ್ದರು. ಈಗಲೂ ಅದೇ ಆಶಯದಲ್ಲಿದ್ದಾರೆ, ಆದ್ರೆ ಅವರು ಅಧಿಕಾರಕ್ಕೆ ಬರೋದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next