Advertisement

ಅರುಣ್ ಸಿಂಗ್ ನಾಯಕತ್ವ ಬದಲಾವಣೆ ವಿಚಾರಕ್ಕೆ ಫುಲ್ ಸ್ಟಾಪ್ ಹಾಕ್ತಾರೆ : ರವಿಕುಮಾರ್

04:13 PM Jun 16, 2021 | Girisha |

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಅನೇಕ‌ ದಿನಗಳಿಂದ ಚರ್ಚೆ ನಡೆಯುತ್ತಿದೆ, ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಅರುಣ್ ಸಿಂಗ್ ಬರ್ತಿದ್ದಾರೆ, ಸಚಿವರ ಜೊತೆ ಸಭೆ ನಡೆಸಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಹೇಳಿಕೆ ನೀಡಿದ್ದಾರೆ.

Advertisement

ನಾಳೆ ಶಾಸಕರ ಜೊತೆ ಸಭೆ ನಡೆಸಲಿದ್ದಾರೆ, ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಅರುಣ್ ಸಿಂಗ್ ಬರುತ್ತಿದ್ದಾರೆ, ಅಭಿಪ್ರಾಯ ಸಂಗ್ರಹಿಸಿ ಫುಲ್ ಸ್ಟಾಪ್ ಹಾಕ್ತಾರೆ, ಮಾಧ್ಯಮಗಳಿಗೆ ಬಹಿರಂಗ ಹೇಳಿಕೆ ನೀಡ್ತಿದ್ದಾರೆ, ಹಾಗಾಗಿ ಅದಕ್ಕೆಲ್ಲ ಬ್ರೇಕ್ ಹಾಕ್ತಾರೆ ಎಂದರು.

ಇಂದು ಸಚಿವರ ಸಭೆಯಲ್ಲಿ ಸಿಎಂ ಕೂಡ ಇರ್ತಾರೆ, ಆದರೆ ನಾಳೆ ಶಾಸಕರ ಅಭಿಪ್ರಾಯ ಪಡೆಯಲಿದ್ದಾರೆ. ಅವರ ಜೊತೆ ವೈಯುಕ್ತಿಕ ವಾಗಿ ಚರ್ಚೆ ನಡೆಸ್ತಾರೆ. ನಾಳೆ ಇಡೀ ದಿನ ಅವರು ಅಭಿಪ್ರಾಯ ತಿಳಿಸಬಹುದು. ಏನೇ ಆದರೂ ಇದಕ್ಕೆ ಫುಲ್ ಸ್ಟಾಪ್ ಹಾಕ್ತಾರೆ. ಯತ್ನಾಳ್ ಜೊತೆಗೂ ಮಾತನಾಡ್ತಾರೆ ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next