Advertisement

ಕೇಂದ್ರದಿಂದ ಕೃಷಿ ಸಾಲ ಮನ್ನಾ ಇಲ್ಲ: ಸಚಿವ ಜೇಟ್ಲಿ

10:59 AM Mar 24, 2017 | Karthik A |

ಹೊಸದಿಲ್ಲಿ: ಕೇಂದ್ರದಿಂದ ರಾಜ್ಯ ಸರಕಾರಗಳಿಗೆ ಯಾವುದೇ ರೀತಿಯ ಕೃಷಿ ಸಾಲ ಮನ್ನಾ ಮಾಡುವುದಿಲ್ಲ. ಅದಕ್ಕಾಗಿ ರಾಜ್ಯ ಸರಕಾರಗಳು ತಮ್ಮದೇ ಆದ ಸಂಪನ್ಮೂಲಗಳನ್ನು ಕಂಡುಕೊಳ್ಳಬೇಕು ಎಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಇದರಿಂದ  ಬೆಳೆ ಸಾಲ ಮನ್ನಾಕ್ಕೆ ಕೇಂದ್ರವೇ ನೆರವು ನೀಡಬೇಕೆಂದು ಒತ್ತಾಯಿಸುತ್ತಿರುವ ಕರ್ನಾಟಕ, ಪಂಜಾಬ್‌ ಸಹಿತ ಹಲವು ರಾಜ್ಯಗಳಿಗೆ ಹಿನ್ನಡೆಯಾಗಿದೆ.

Advertisement

ಕೇಂದ್ರ ಸರಕಾರ ರಾಜ್ಯಗಳನ್ನು ಆಧರಿಸಿ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ ಜೇಟ್ಲಿ, ಸಾಲ ಮನ್ನಾ ವಿಚಾರ ಹಲವು ರಾಜ್ಯಗಳಲ್ಲಿ ಕಗ್ಗಂಟಿನ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಕೃಷಿ ಕ್ಷೇತ್ರಕ್ಕಾಗಿ ಕೇಂದ್ರ ಹಲವು ಯೋಜನೆಗಳನ್ನು ಹೊಂದಿದೆ. ಅದರಲ್ಲಿ ಬಡ್ಡಿ ನೀಡಿಕೆಯೂ ಒಳಗೊಂಡಿದೆ ಎಂದಿದ್ದಾರೆ. ಅದಕ್ಕೆ ಅನುಸಾರ ರಾಜ್ಯ ಸರಕಾರಗಳಿಗೆ ನೆರವು ನೀಡಲಾಗುತ್ತದೆ ಎಂದಿದ್ದಾರೆ ಜೇಟ್ಲಿ.

Advertisement

Udayavani is now on Telegram. Click here to join our channel and stay updated with the latest news.

Next