Advertisement

ಮಸೂದ್‌ ಅಜರ್‌ ವಿರುದ್ಧ ಭಾರತದ ಜಯ, ವಿಪಕ್ಷಗಳಿಗೆ ಭಯ: ಅರುಣ್‌ ಜೇತ್ಲಿ

09:59 AM May 03, 2019 | Sathish malya |

ಹೊಸದಿಲ್ಲಿ : ಪಾಕ್‌ ಮೂಲದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥನಾಗಿರುವ ಹಾಗೂ ಮುಂಬಯಿ ಮತ್ತು ಪುಲ್ವಾಮಾ ಆತ್ಮಾಹುತಿ ದಾಳಿ ಸೇರಿದಂತೆ ಭಾರತದಲ್ಲಿ ನಡೆದಿದ್ದ ಹಲವಾರು ಭಯೋತ್ಪಾದಕ ದಾಳಿಗಳ ಮಾಸ್ಟರ್‌ ಮೈಂಡ್‌ ಆಗಿದ್ದ ಮಸೂದ್‌ ಅಜರ್‌ ನನ್ನು ವಿಶ್ವಸಂಸ್ಥೆಯ ಮೂಲಕ ಜಾಗತಿಕ ಉಗ್ರನೆಂದು ಘೋಷಿಸಿಕೊಳ್ಳುವಲ್ಲಿ ಸರಕಾರ ಮತ್ತು ಪ್ರಧಾನಿಯ ಅವಿರತ ಶ್ರಮ ಶ್ಲಾಘನೀಯವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇತ್ಲಿ ಇಂದು ಗುರುವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ನಡೆಸಿಕೊಟ್ಟ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

Advertisement

ಪ್ರಧಾನಿ ನರೇಂದ್ರ ಮೋದಿ ಅವರ ಅವಿರತ ಯತ್ನ ಮತ್ತು ಭಯೋತ್ಪಾದನೆ ವಿರುದ್ಧದ ಶೂನ್ಯ ಸಹನೆಯ ಫ‌ಲಶ್ರುತಿ ಇದಾಗಿದೆ ಎಂದ ಜೇತ್ಲಿ , ಭಾರತದ ಈ ದಿಗ್ವಿಜಯ ವಿರೋಧ ಪಕ್ಷಗಳಿಗೆ ಭಯ ಹುಟ್ಟಿಸಿದೆ ಎಂದು ಹೇಳಿದರು.

ಮಸೂದ್‌ ಅಜರ್‌ ನನ್ನು ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ  ಘೋಷಿಸಿರುವುದು ‘ಒಂದು ಸಾಮಾನ್ಯ ಸಂಗತಿ’ ಎಂದು ಕರೆದಿರುವ ಕಾಂಗ್ರೆಸ್‌ ಸಹಿತ ವಿರೋಧ ಪಕ್ಷಗಳನ್ನು ಜೇತ್ಲಿ ಕಟುವಾಗಿ ಖಂಡಿಸಿದರು.

ಪುಲ್ವಾಮಾ ಆತ್ಮಾಹುತಿ ದಾಳಿ ಮತ್ತು ಅದನ್ನು ಅನುಸರಿಸಿ ಭಾರತೀಯ ವಾಯು ಪಡೆ ನಡೆಸಿದ್ದ ಪಾಕಿಸ್ಥಾನದ ಬಾಲಾಕೋಟ್‌ ಮೇಲಿನ ಬಾಂಬ್‌ ದಾಳಿಯ ಬಳಿಕದಲ್ಲಿ ಚೀನದ ದೃಷ್ಟಿಕೋನ ಬದಲಾಯಿತೆಂದು ಜೇತ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next