Advertisement

ಕಲಾವಿದನಿಗೆ ಉತ್ತಮ ವೇದಿಕೆ ಅವಶ್ಯ: ಫ‌ರ್ಹಾನ್‌ ಅಖ್ತರ್‌

09:35 AM Jan 15, 2018 | Team Udayavani |

ಮಂಗಳೂರು: ಒಬ್ಬ ಕಲಾವಿದ, ಹಾಡುಗಾರನಿಗೆ ಉತ್ತಮ ವೇದಿಕೆ ದೊರೆಯುವುದು ಬಹಳ ಮುಖ್ಯ. ಅದನ್ನು ಸರಿಯಾಗಿ ಬಳಸಿ ಕೊಳ್ಳುವುದು ಒಬ್ಬ ಉದಯೋನ್ಮುಖ ನಟ, ಹಾಡುಗಾರನ ಹೊಣೆ ಎಂದು ನಟ, ಹಾಡುಗಾರ, ನಿರ್ದೇಶಕ ಫ‌ರ್ಹಾನ್‌ ಅಖ್ತರ್‌ ಹೇಳಿದರು.

Advertisement

ಇಂಪೀರಿಯಲ್‌ ಬ್ಲೂ ಸೂಪರ್‌ಹಿಟ್‌ ನೈಟ್ಸ್‌ ಸೀಸನ್‌ 4ರಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ನಟನೆ, ಸಿನೆಮಾ ಮತ್ತು ಸಂಗೀತ ವಿಭಿನ್ನ ಅನುಭವವನ್ನು ನೀಡುತ್ತದೆ. ಒಂದನ್ನು ಬಿಟ್ಟು ಇನ್ನೊಂದನ್ನು ಆಯ್ಕೆ ಮಾಡುವಂತಿಲ್ಲ. ಎಲ್ಲವನ್ನೂ ಸಮಾನವಾಗಿ ಸರಿತೂಗಿಸಿಕೊಂಡು ಹೋಗುವುದು ನನಗೆ ಖುಷಿ ನೀಡುತ್ತದೆ. ಜೀವನದಲ್ಲಿ ಉತ್ತಮ ಅನುಭವಗಳನ್ನು ಪಡೆದುಕೊಳ್ಳುವುದು ನಮ್ಮನ್ನು ಸರಿ ದಾರಿಯಲ್ಲಿ ಕೊಂಡೊಯ್ಯಲು ಸಹಕಾರಿಯಾಗುತ್ತದೆ ಎಂದು ಅಖ್ತರ್‌ ತಿಳಿಸಿದರು.

ಮೂರು ವರ್ಷಗಳ ಹಿಂದೆ ಮಣಿಪಾಲ ವಿಶ್ವವಿದ್ಯಾನಿಲಯದ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದೆ. ಮಂಗಳೂರಿಗೆ ಬರಲು ಬಹಳ ಸಂತೋಷವಾಗುತ್ತದೆ. ಪ್ರಸ್ತುತ ಗೋಲ್ಡ್‌ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದೇನೆ. ಆ ಕೆಲಸ ಹಾಗೂ ಹಾಡುಗಾರಿಕೆಯಲ್ಲಿ ನಾನು ಬ್ಯುಸಿಯಾಗಿದ್ದೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next