Advertisement

ಇಂದು ಕೇರಳಕ್ಕೆ ಮುಂಗಾರು?

10:11 PM May 26, 2022 | Team Udayavani |

ನವದೆಹಲಿ: ಶ್ರೀಲಂಕಾದ ದಕ್ಷಿಣ ಭಾಗವನ್ನು ಆವರಿಸಿರುವ ನೈರುತ್ಯ ಮಾರುತವು ಕೇರಳದ ಕಡೆಗೆ ಸಂಚರಿಸುತ್ತಿದ್ದು, ಶುಕ್ರವಾರ ದೇವರ ನಾಡನ್ನು ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ.

Advertisement

ಮುಂಗಾರು ಚುರುಕಾಗಿದ್ದು, ನಿರಂತರವಾಗಿ ಅದರ ಮೇಲೆ ಗಮನವಿಡಲಾಗುತ್ತಿದೆ. ಈ ಬಾರಿ ವಾಡಿಕೆಗಿಂತ ಮುಂಚೆಯೂ ಮುಂಗಾರಿನ ಪ್ರವೇಶವಾಗಲಿದ್ದು, ಶುಕ್ರವಾರ ಅದು ರಾಜ್ಯಕ್ಕೆ ಕಾಲಿಡುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಗುರುವಾರವೂ ಕೇರಳದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿದ್ದು, 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next