Advertisement

250 ಮಂದಿ ವ್ಯಕ್ತಿಗಳಿಗೆ ಕಚ್ಚಿದ ಕೋತಿಗೆ “ಬಂಧನ’ಶಿಕ್ಷೆ

08:36 AM Jun 17, 2020 | mahesh |

ಕಾನ್ಪುರ: ಮದ್ಯ ಸೇವಿಸಿದ ಮಾನವರು ಅದು ಸಿಗದೆ ಇದ್ದರೆ ವಿಚಿತ್ರವಾಗಿ ವರ್ತಿಸುತ್ತಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಮದ್ಯ ಸಿಗದೆ ಸಿಟ್ಟಿನಿಂದ ಇದ್ದ ಕೋತಿ 250 ಮಂದಿಗೆ ಕಚ್ಚಿದೆ. ಜತೆಗೆ ಒಬ್ಬನ ಜೀವವನ್ನೂ ಆಪೋಷನ ಪಡೆದಿದೆ. ಇದರಿಂದಾಗಿ ಅದನ್ನು ಜೀವನ ಪರ್ಯಂತ ಮೃಗಾಲಯದಲ್ಲಿಯೇ ಬಂದಿಯಂತೆ ಇರಿಸಲು ನಿರ್ಧರಿಸಲಾಗಿದೆ. ಮಿರ್ಜಾಪುರ ಜಿಲ್ಲೆಯ ಮ್ಯಾಜಿಕ್‌ ಮಾಡುವ ವ್ಯಕ್ತಿ ಬಳಿ ಈ ಕೋತಿ ಇತ್ತು. ಆತ ಪ್ರೀತಿಯಿಂದ ಅದಕ್ಕೆ ಮದ್ಯ ನೀಡುತ್ತಿದ್ದ. ಆ ವ್ಯಕ್ತಿ ಅಸುನೀಗಿದ ಬಳಿಕ ಸಿಗುತ್ತಿದ್ದ ಮದ್ಯ ನಿಂತು ಹೋಯಿತು. ಇದರಿಂದಾಗಿ ಅದು ರೋಷಗೊಂಡು, ಕಿತಾಪತಿ ಮಾಡಲು ಶುರು ಮಾಡಿತ್ತು. ಕೊನೆಗೊಂದು ದಿನ ಸ್ಥಳೀಯ ಅಧಿ ಕಾರಿಗಳ ಕೈಗೆ ತಂಟೆ ಮಾಡುತ್ತಿದ್ದ ವೇಳೆ ಸಿಕ್ಕಿ ಬಿತ್ತು. ಅದನ್ನು ಕಾನ್ಪುರ ಮೃಗಾಲಯಕ್ಕೆ ತರಲಾಗಿದೆ. ಇಷ್ಟೆಲ್ಲಾ ಘಟನೆಗಳು ನಡೆದದ್ದು ಮೂರು ವರ್ಷಗಳ ಹಿಂದೆ. ಈಗಲೂ ಅದರ ವರ್ತನೆಯಲ್ಲಿ ಬದ ಲಾವಣೆ ಬರದೇ ಇದ್ದ ಕಾರಣ, ಅದನ್ನು ಜೀವನ ಪರ್ಯಂತ ಪ್ರತ್ಯೇಕ ವಾಗಿ ಇರಿಸಲು ನಿರ್ಧರಿಸಲಾಗಿದೆ ಎಂದು ಮೃಗಾಯದ ನಿರ್ದೇಶಕ ಮೊಹಮ್ಮದ್‌ ನಾಸಿರ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next