Advertisement

ನಟ ಸುದೀಪ್ ವಿರುದ್ಧ ಅರೆಸ್ಟ್ ವಾರಂಟ್; ಏನಿದು ಪ್ರಕರಣ

09:13 AM Mar 29, 2019 | Nagendra Trasi |

ಚಿಕ್ಕಮಗಳೂರು: ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಗೆ ಚಿಕ್ಕಮಗಳೂರು ಜೆಎಂಎಫ್ ಸಿ ನ್ಯಾಯಾಲಯ ಬುಧವಾರ ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ.

Advertisement

ಸುದೀಪ್ ಅವರ ನಿರ್ಮಾಣದ ವಾರಸ್ಥಾರ ಧಾರವಾಹಿ ಚಿತ್ರೀಕರಣಕ್ಕಾಗಿ ದೀಪಕ್ ಮಯೂರ್ ಎಂಬವರ ಮನೆ, ತೋಟವನ್ನು ಬಾಡಿಗೆ ನೆಲೆಯಲ್ಲಿ ನೀಡಲಾಗಿದ್ದು, ಈ ಸಂದರ್ಭದಲ್ಲಿ ಧಾರವಾಹಿ ತಂಡ ತೋಟವನ್ನು ಹಾಳುಗೆಡವಿದ್ದಲ್ಲದೇ, ಬಾಡಿಗೆ ಹಣ ನೀಡದೆ ವಂಚಿಸಿರುವುದಾಗಿ ದೂರಿ ದೀಪಕ್ ದೂರು ದಾಖಲಿಸಿದ್ದರು.

ಸುಮಾರು ಒಂದೂವರೆ ಕೋಟಿ ರೂಪಾಯಿಯಷ್ಟು ನಷ್ಟ ಸಂಭವಿಸಿದ್ದು, ಈ ಹಣವನ್ನು ತಮಗೆ ವಾಪಸ್ ಕೊಡಬೇಕೆಂದು ದೀಪಕ್ ಧಾರಾವಾಹಿ ತಂಡಕ್ಕೆ ತಿಳಿಸಿದ್ದರು. ಆದರೆ ಈ ಬೇಡಿಕೆಯನ್ನು ಸುದೀಪ್ ಕ್ರಿಯೇಶನ್ಸ್ ತಿರಸ್ಕರಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ಬುಧವಾರ ಕೋರ್ಟ್ ಗೆ ಹಾಜರಾಗಬೇಕಾಗಿತ್ತು. ಆದರೆ ಸುದೀಪ್ ಇಂದು ವಿಚಾರಣೆಗೆ ಗೈರುಹಾಜರಾಗಿದ್ದರಿಂದ ಜೆಎಂಎಫ್ ಸಿ ಕೋರ್ಟ್ ಅರೆಸ್ಟ್ ವಾರಂಟ್ ಹೊರಡಿಸಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next