Advertisement

ಪುತ್ರನ ಬಂಧನ ಎಂದು ಉದ್ಯಮಿಗೆ ಹಣದ ಬೇಡಿಕೆ ಇಟ್ಟ ಅನಾಮಿಕರು !

12:09 AM Jun 16, 2024 | Team Udayavani |

ಪುತ್ತೂರು: ಬೊಳುವಾರಿನ ಜವುಳಿ ಮಳಿಗೆಯೊಂದರ ಮಾಲಕರಿಗೆ ಅನಾಮಿಕರು ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಮಳಿಗೆಯ ಮಾಲಕ ಗೋಪಾಲ ದೂರು ನೀಡಿದವರು. ನಾಲ್ಕು ದಿನಗಳ ಹಿಂದೆ ಕರೆ ಮಾಡಿದ ಅನಾಮಿಕ ವ್ಯಕ್ತಿ ಹಿಂದಿಯಲ್ಲಿ ಮಾತನಾಡಿ, ಸಿಬಿಐ ಕ್ರೈಂ ಬ್ರ್ಯಾಂಚ್‌ನಿಂದ ಮಾತನಾಡುತ್ತಿದ್ದೇನೆ ಎಂದು ಪರಿಚಯಿಸಿ, ಕೃಷ್ಣ ಪ್ರಣಾಮ್‌ ಯಾರು ಎಂದು ಪ್ರಶ್ನಿಸಿದ್ದಾನೆ.

ಉತ್ತರಿಸಿದ ಗೋಪಾಲ್‌ ಆತ ನನ್ನ ಪುತ್ರ ಎಂದು ಹೇಳಿದ್ದರು. ನಿಮ್ಮ ಮಗನನ್ನು ಡ್ರಗ್ಸ್‌ ಕೇಸ್‌ನಲ್ಲಿ ಬಂಧಿಸಿದ್ದೇವೆ. ನಿಮ್ಮ ಮಗ ಸೇರಿದಂತೆ ಮೂವರನ್ನು ಈ ಕೇಸ್‌ನಲ್ಲಿ ಬಂಧಿಸಿ ದಿಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ. ಈ ಸಂದರ್ಭದಲ್ಲಿ ಗೋಪಾಲ ಪುತ್ರನ ಜತೆ ಮಾತನಾಡಿಸಿ ಎಂದಾಗ ಆ ಕಡೆಯಿಂದ ರಾಜಿ ಮಾಡೋಣ ಎಂದು ಹೇಳಿ ಹಣಕ್ಕೆ ಬೇಡಿಕೆ ಇಟ್ಟರು. ಇದರಿಂದ ಸಂಶಯಗೊಂಡ ಗೋಪಾಲ, ಹಣ ನೀಡುವುದಿಲ್ಲ, ಜೈಲಿಗೆ ಕರೆದುಕೊಂಡು ಹೋಗಿ ಎಂದಾಗ ಕರೆ ಕಟ್‌ ಆಯಿತು. ಆ ಬಳಿಕ ಗೋಪಾಲ ಅವರು ಪುತ್ರನಿಗೆ ಕರೆ ಮಾಡಿ ವಿಚಾರಿಸಿದ್ದು ಈ ವೇಳೆ ಆತ ಯಾವುದೇ ಸಮಸ್ಯೆ ಇಲ್ಲದೆ ಇರುವುದು ಕಂಡು ಬಂದಿತ್ತು.

ಮತ್ತೆ ಕರೆ !
ಅನಾಮಿಕರು ಕೆಲವು ದಿನ ಕಳೆದು ಗೋಪಾಲ ಅವರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಗೋಪಾಲ ಅವರು ಫೋನ್‌ ಪೇ ನಂಬರ್‌ ಕಳಿಸಲು ಹೇಳಿದ್ದರು. ನಂಬರ್‌ ಹೇಳಿದ ಅನಾಮಿಕ 50,000 ರೂ. ಹಾಕುವಂತೆ ತಿಳಿಸಿದ್ದ. ಅರ್ಧ ಗಂಟೆ ಕಳೆದು ಹಣ ಕಳಿಸುತ್ತೇನೆ ಎಂದು ಹೇಳಿ ಗೋಪಾಲ್‌ ಕರೆ ಮಾಡಿದ್ದಾರೆ. ಪೋನ್‌ ನಂಬರ್‌ ಅನ್ನು ಟ್ರೂಕಾಲರ್‌ನಲ್ಲಿ ಪರಿಶೀಲಿಸಿದಾಗ ಫಝಲ್‌ ಎಂಬ ಹೆಸರು ಬಂದಿದ್ದು ಪಾಕಿಸ್ಥಾನದ ಕೋಡ್‌ ಸಂಖ್ಯೆ ಆರಂಭವಾಗುವ ನಂಬರ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next