Advertisement

‘ಚೀತಾಗೆ ಸೀಮಂತ ಯಾವಾಗ?’ಪೋಸ್ಟ್: ಸಾಮಾಜಿಕ ಕಾರ್ಯಕರ್ತನ ಬಂಧನ; ಬಿಡುಗಡೆ

03:22 PM Oct 08, 2022 | Team Udayavani |

ಮಂಗಳೂರು: ಮಹಿಳೆಯರಿಗೆ ಅವಮಾನ ಮತ್ತು ಪೊಲೀಸರ ಕರ್ತವ್ಯಕ್ಕೆೆ ಅಡ್ಡಿ ಪ್ರಕರಣದಲ್ಲಿ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿಯನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

Advertisement

ಸುನಿಲ್ ಬಜಿಲಕೇರಿ ಫೇಸ್‌ಬುಕ್‌ನಲ್ಲಿ ಗರ್ಭಿಣಿಗೆ ಚೀತಾ ಮುಖವನ್ನು ಜೋಡಿಸಿ ‘ನಮೀಬಿಯಾ ಚೀತಾಗೆ ಸೀಮಂತ ಯಾವಾಗ?’ ಎಂದು ಬರೆದಿದ್ದು ಈ ಬಗ್ಗೆೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಸುನಿಲ್ ಬಜಿಲಕೇರಿಯನ್ನು ಬಂಧಿಸಲು ಹೋದಾಗ ಆತ ಕರ್ತವ್ಯಕ್ಕೆೆ ಅಡ್ಡಿಪಡಿಸಿದ್ದು ಈ ಬಗ್ಗೆೆ ಮತ್ತೊಂದು ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ : ಪಿಜ್ಜಾ ಡೆಲಿವರಿ ಮಹಿಳೆಗೆ ದುಡ್ಡು ಪಾವತಿಸಿ ಪಿಜ್ಜಾ ತೆಗೆದುಕೊಂಡ ಚಿಂಪಾಂಜಿ: ವಿಡಿಯೋ ವೈರಲ್

ಆರೋಪಿ ವಿರುದ್ಧ ಬಜಪೆ ಮತ್ತು ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next