Advertisement

ಆ್ಯಂಬುಲೆನ್ಸ್‌ನಲ್ಲಿ ಯುವಕರನ್ನು ಸಾಗಿಸುತ್ತಿದ್ದ ಚಾಲಕನ ಸೆರೆ

04:18 PM Apr 15, 2020 | Team Udayavani |

ಚನ್ನರಾಯಪಟ್ಟಣ: ಆ್ಯಂಬುಲೆನ್ಸ್‌ನಲ್ಲಿ ಬೆಂಗಳೂರಿನಿಂದ ಬೇಲೂರಿಗೆ ಐವರು ಯುವ ಜನರನ್ನು ಕರೆದೊಯ್ಯುತ್ತಿದ್ದ ಚಾಲಕ ದರ್ಶನ್‌ ಎಂಬಾತನನ್ನು ಪೊಲೀಸರು ಮಂಗಳವಾರ ಬಂಧಿಸಿ ಆ್ಯಂಬುಲೆನ್ಸ್‌ ವಶಪಡಿಸಿಕೊಂಡಿದ್ದಾರೆ.

Advertisement

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಬೇಲೂರು ತಾಲೂಕಿನ ವಿವಿಧ ಗ್ರಾಮಗಳ ಐವರನ್ನು ಸಾಗಿಸಲು ಆ್ಯಂಬುಲೆನ್ಸ್‌ ಚಾಲಕ 7ಸಾವಿರ ರೂ. ಬಾಡಿಗೆ ಮಾತನಾಡಿಕೊಂಡು ಬರುತ್ತಿದ್ದನೆನ್ನಲಾಗಿದೆ. ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಸಮೀಪ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ತೆರೆದಿರುವ ಕೊರೊನಾ ಚೆಕ್‌ಪೋಸ್ಟ್‌ನಲ್ಲಿ ಆ್ಯಂಬುಲೆನ್ಸ್‌ನು° ಹಿರೀಸಾವೆ ಪೊಲೀಸರು ಚೆಕ್‌ ಮಾಡಿದಾಗ ಐವರು ಆ್ಯಂಬುಲೆನ್ಸ್‌ನಲ್ಲಿದ್ದುದು ಪತ್ತೆಯಾಯಿತು. ಚಾಲಕನ್ನು ಬಂಧಿಸಿದ ಪೊಲೀಸರು ಆ್ಯಂಬುಲೆನ್ಸ್‌ ವಶಕ್ಕೆ ಪಡೆದಿದ್ದಾರೆ.

ಐವರು ಯುವಕರನ್ನು ಹಿರೀಸಾವೆ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ.ಶಿವಸ್ವಾಮಿ ಪರೀಕ್ಷೆ ನಡೆಸಿ ಕೋವಿಡ್ 19 ಲಕ್ಷಣಗಳಿಲ್ಲವೆಂದು ದೃಢಪಡಿಸಿದರು. ಅವರಿಗೆ ಹೋಂ ಕ್ವಾರೆಂಟೈನಲ್ಲಿರಲು  ಪೊಲೀಸರು ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next