Advertisement

ಪ್ರೀಯತಮೆಯ ಕೊಂದವನ ಬಂಧನ

11:06 AM Aug 23, 2018 | Team Udayavani |

ಬೆಂಗಳೂರು: ವೈಟ್‌ಫಿಲ್ಡ್‌ನ ಇಮ್ಮಡಿಹಳ್ಳಿಯ ಕೈತೋಟ ಎಂಬಲ್ಲಿ ಪ್ರಿಯತಮೆಯನ್ನು ಕೊಲೆಗೈದು ದೆಹಲಿಗೆ ಪರಾರಿಯಾಗಿದ್ದ ಆರೋಪಿಯನ್ನು ವೈಟ್‌ಫಿಲ್ಡ್‌ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೆಹಲಿ ಮೂಲದ ಹರೀಶ್‌ ಕುಮಾರ್‌ (24) ಬಂಧಿತ. ಆರೋಪಿ ತನ್ನ ಪ್ರಿಯತಮೆ ವಿಜಯಲಕ್ಷ್ಮೀಯನ್ನು ಕತ್ತು ಹಿಸುಕಿ ಹತ್ಯೆಗೈದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ದೆಹಲಿಯಲ್ಲಿ ಜಿಮ್‌ ತರಬೇತುದಾರನಾಗಿದ್ದ ಆರೋಪಿ ಹರೀಶ್‌ ಕುಮಾರ್‌ ಹಾಗೂ ವಿಜಯ ಲಕ್ಷ್ಮೀ ಕಳೆದ 3-4
ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಮಧ್ಯೆ ಆಗಸ್ಟ್‌ ಮೊದಲ ವಾರದಲ್ಲಿ ವಿಜಯಲಕ್ಷ್ಮೀ ಕೆಲಸ ನಿಮಿತ್ತ ಬೆಂಗಳೂರಿಗೆ ಬಂದು ಇಲ್ಲಿಯೇ ತಂಗಿದ್ದರು. ಈ ವೇಳೆ ತನ್ನ ಪ್ರಿಯಕರನ ಜತೆ ಹೆಚ್ಚು ಮಾತನಾಡುತ್ತಿರಲಿಲ್ಲ. ಇದರಿಂದ ಬೇಸರಗೊಂಡ ಆರೋಪಿ 10 ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ಆಕೆ ಜತೆ ವೈಟ್‌ಫೀಲ್ಡ್‌ನ ಇಮ್ಮಡಿಹಳ್ಳಿಯ ಕೈ ತೋಟ ಎಂಬಲ್ಲಿ ವಾಸವಾಗಿದ್ದ ಎಂದು ಪೊಲೀಸರು ಹೇಳಿದರು.

ಸಾಫ್ಟ್ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಜಯಲಕ್ಷ್ಮೀ ನಿತ್ಯ ತಡರಾತ್ರಿ ಮನೆಗೆ ಬರುತ್ತಿದ್ದರು. ಇದರಿಂದ ಅನುಮಾನಗೊಂಡ ಆರೋಪಿ ಪ್ರಶ್ನಿಸಿ ಆಕೆ ಜತೆ ವಾಗ್ವಾದ ನಡೆಸಿದ್ದಾನೆ. ಈ ವೇಳೆ ಕೋಪಗೊಂಡ ಆರೋಪಿ, ವಿಜಯಲಕ್ಷ್ಮೀಯ ಕತ್ತು ಹಿಸುಕಿ ಕೊಲೆಗೈದು ದೆಹಲಿಗೆ ಪರಾರಿಯಾಗಿದ್ದ. ಇತ್ತ ಕೊಲೆ ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಆರೋಪಿ ರಾಜಸ್ಥಾನ್‌ಗೆ ಪರಾರಿಯಾಗಿದ್ದ. ಅಲ್ಲಿಂದ ಮತ್ತೆ ದೆಹಲಿಯಲ್ಲಿ ಸ್ನೇಹಿತನ ಮನೆಯಲ್ಲಿ ಅವಿತುಕೊಂಡಿದ

Advertisement

Udayavani is now on Telegram. Click here to join our channel and stay updated with the latest news.

Next