Advertisement

ಕೊಲೆ ಆರೋಪಿಗಳ ಬಂಧನ  

06:53 PM Feb 18, 2021 | Team Udayavani |

ಅಡಹಳ್ಳಿ : ಕೊಕಟನೂರು ಗ್ರಾಮದಲ್ಲಿ ಇತ್ತೀಚೆಗೆ ಬಾವಿ ನೀರು ಪಾಳೆ ಸಲುವಾಗಿ ಸೀಮೆಎಣ್ಣೆ ಎರಚಿ ಕೊಲೆಗೈದ ಮೂವರು ಆರೋಪಿಗಳನ್ನು ಐಗಳಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

Advertisement

ಕೊಕಟನೂರ ಗ್ರಾಮದ ಸದಾಶಿವ ಮಾದರ, ಶಂಕರ ಮಾದರ ಹಾಗೂ ಸುನೀಲ ಮಾದರ ಬಂಧಿತ ಆರೋಪಿಗಳು. ಈ ಕುರಿತು ಐಗಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್‌ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್‌ ಅಧಿಕ್ಷಕ ಅಮರನಾಥ ರೆಡ್ಡಿ ಮಾರ್ಗದರ್ಶನಲ್ಲಿ ಅಥಣಿ ಡಿವೈಎಸ್‌ಪಿ ಎಸ್‌.ವಿ ಗಿರೀಶ ಹಾಗೂ ಸಿಪಿಐ ಶಂಕರಗೌಡ ಬಸನಗೌಡರ ನೇತ್ರತ್ವದಲ್ಲಿ ಐಗಳಿ ಪಿಎಸ್‌ಐ ಶಿವರಾಜನಾಯಿಕವಾಡಿ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಹಿಂಡಲಗಾ ಜೈಲಿಗೆ ರವಾನಿಸಿದೆ.

ದಾಳಿಯಲ್ಲಿ ಐಗಳಿ ಪಿಎಸ್‌ಐ ಶಿವರಾಜ ನಾಯಿಕವಾಡಿ, ಎಎಸ್‌ಐ ಶಂಕರ ಸವದಿ, ಎಂ.ಬಿ. ದೊಡಮನಿ, ಅಣ್ಣಾಸಾಬ ಈರಕರ, ಗಿರಿಮಲ್ಲ ದೊಡಮನಿ, ಸುಭಾಷ ಬಬಲೇಶ್ವರ, ಬಿ.ಬಿ ಪಾಟೀಲ, ಎಂ.ಎಂ. ಖೋತ, ಅಕºರ್‌ ಮುಜಾವರ, ಬಸವರಾಜ ಡಬಳೇಶ್ವರ, ಮುರಳಿ ದೊಡಮನಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next