Advertisement

ನಿಪ್ಲಿ ಜಲಪಾತ ಸಮೀಪ ವಾಹನ ನಿಲುಗಡೆಗೆ ವ್ಯವಸ್ಥೆ

01:16 PM Jul 21, 2019 | Team Udayavani |

ಸಿದ್ದಾಪುರ: ಹಲಗೇರಿ ಗ್ರಾಪಂ ವ್ಯಾಪ್ತಿಯ ನಿಪ್ಲಿ ಜಲಪಾತ ಉಸ್ತುವಾರಿ ಸಮಿತಿ ತಹಶೀಲ್ದಾರ್‌ ಗೀತಾ ಸಿ.ಜಿ. ಗೌರವ ಅಧ್ಯಕ್ಷತೆಯಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಸದಸ್ಯರ ಸಮ್ಮುಖದಲ್ಲಿ ಅಲ್ಲಿನ ಸರಕಾರಿ ಪಡ ಜಮೀನಿನಲ್ಲಿ ಮಳೆಗಾಲದಲ್ಲಿ ತಾತ್ಕಾಲಿಕವಾಗಿ ವ್ಯಾಪಾರಕ್ಕೆ, ವಾಹನಗಳ ಪಾರ್ಕಿಂಗ್‌ ಹಾಗೂ ಸ್ವಚ್ಛತೆ ನಿರ್ವಹಣೆಗೆ ಹರಾಜು ಪ್ರಕ್ರಿಯೆ ನಡೆಸಿತು.

Advertisement

ಜಲಪಾತದ ಸಮೀಪ ವಾಹನಗಳನ್ನು ಅಚ್ಚುಕಟ್ಟಾಗಿ ನಿಲುಗಡೆಗೊಳಿಸಿ ನಿಗದಿತ ಶುಲ್ಕ ವಸೂಲು ಮಾಡಲು ಹಾಗೂ ಅಲ್ಲಿ ಸ್ವಚ್ಛತೆ ಕಾಪಾಡುವ ಕಾರ್ಯವನ್ನು ನಿಬಂಧನೆ ಮೇರೆಗೆ ರಮೇಶ ನಾರಾಯಣ ನಾಯ್ಕ ಹರಾಜಿನಲ್ಲಿ ಪಡೆದುಕೊಂಡರು. ಜಲಪಾತದ ಸಮೀಪ ಮಳಿಗೆಗಳನ್ನು ಹರಾಜು ಮಾಡಲಾಗಿದ್ದು ದನಕರುಗಳು ಮೇಯಲು ಜಾಗ ಬೇಕಾಗಿದ್ದು ಮತ್ತು ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಮಳಿಗೆಗಳನ್ನು ಇಡುವುದು ಬೇಡವೆನ್ನುವ ಗ್ರಾಮಸ್ಥರ ಬೇಡಿಕೆ ಮೇರೆಗೆ ಜಲಪಾತದ ಬಳಿ ಯಾವುದೇ ವ್ಯಾಪಾರ ಮಳಿಗೆ ಇರಿಸುವುದು ಮತ್ತು ವ್ಯಾಪಾರ ಮಾಡದಂತೆ ನಿರ್ಬಂಧಿಸಿ ನಿರ್ಣಯ ಕೈಗೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next