Advertisement

ರಜೆಗೆ ಬಂದಿದ್ದ ಯೋಧನಿಗೆ ಸೇನೆಯ ದಿಢೀರ್‌ ಬುಲಾವ್‌

12:20 AM Feb 28, 2019 | Team Udayavani |

ಕಲಬುರಗಿ: ವರ್ಷದ ಮಗು ಹಾಗೂ ಕುಟುಂಬದೊಂದಿಗೆ ಕಾಲ ಕಳೆಯಲು 25 ದಿನಗಳ ಕಾಲ ರಜೆ ಮೇಲೆ ಎರಡು ದಿನಗಳ ಹಿಂದೆ ನಗರಕ್ಕೆ ಬಂದಿದ್ದ ಯೋಧನಿಗೆ ಭಾರತೀಯ ಸೈನ್ಯಾಧಿಕಾರಿಯಿಂದ ಬುಲಾವ್‌ ಬಂದಿದ್ದು, ಬುಧವಾರ ಬೆಳಗ್ಗೆ ರೈಲಿನ ಮೂಲಕ ತೆರಳಿದರು.

Advertisement

ನಗರದ ಅಂಬಿಕಾ ನಗರದ ಮಹದೇವ ಕುಂಬಾರ ಎಂಬ ಯೋಧ ವಾಪಸ್‌ ಭಾರತೀಯ ಸೇನೆ ತಂಡಕ್ಕೆ ಸೇರಿಕೊಳ್ಳಲು ಶ್ರೀನಗರಕ್ಕೆ ತೆರಳಿದ್ದು, ಮಂಗಳವಾರ ಮಧ್ಯಾಹ್ನ ಶ್ರೀನಗರದಲ್ಲಿರುವ ಭಾರತೀಯ ಸೇನಾಧಿಕಾರಿಯಿಂದ ಕರೆ ಬಂದಿದ್ದರಿಂದ ಬುಧವಾರ ನಾಗರಕೊಯಿಲ್‌ ರೈಲಿನ ಮೂಲಕ ದೌಂಡ್‌ವರೆಗೆ ತೆರಳಿ ಅಲ್ಲಿಂದ ವಿಶೇಷ ರೈಲಿನಲ್ಲಿ ತೆರಳಿದರು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.

ಭಾರತ-ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಕವಿದಿರುವುದರಿಂದ ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ಹಾಜರಾಗಿ ಎನ್ನುವ ಆದೇಶ ಸೇನಾಧಿಕಾರಿಕಾರಿಯಿಂದ ಬಂದಿದೆ. ಹೀಗಾಗಿ ಹೋಗಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next