Advertisement

ಪ್ರವಾಹಕ್ಕೆ ಮನೆ ಛಾವಣಿಯಲ್ಲಿ ಸಿಲುಕಿದ್ದ ಮೇಕೆಗಳನ್ನು ರಕ್ಷಿಸಿದ ಯೋಧರು

11:37 AM Aug 20, 2019 | Team Udayavani |

ನವಾನ್ ಶಹರ್: ಪಂಜಾಬ್ ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇದರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎನ್.ಡಿ.ಆರ್.ಎಫ್. ತಂಡ ಮತ್ತು ಸೇನಾ ಜವಾನರು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಅವರ ಹುಟ್ಟೂರಾಗಿರುವ ನವಾನ್ ಶಹರ್ ಸಹ ಪ್ರವಾಹ ಪೀಡಿತವಾಗಿದೆ. ಇಲ್ಲಿನ ಜಲ್ಲಾ ಮಾಜ್ರಾ ಗ್ರಾಮದಲ್ಲಿ ಮನೆಯೊಂದರ ಸುತ್ತ ಪ್ರವಾಹದ ನೀರು ತುಂಬಿಕೊಂಡಿದ್ದರಿಂದ ಆ ಪುಟ್ಟ ಮನೆಯ ಮಾಡಿನ ಮೇಲೆ ಆಶ್ರಯ ಪಡೆದಿದ್ದ ಮೇಕೆಗಳನ್ನು ಮತ್ತು ಇಬ್ಬರು ವ್ಯಕ್ತಿಗಳನ್ನು ಸೇನಾ ತಂಡ ರಕ್ಷಿಸಿ ದೋಣಿಯಲ್ಲಿ ಕರೆತರುತ್ತಿರುವ ವಿಡೀಯೋ ಇಲ್ಲಿದೆ.

ಚಿಕ್ಕದಾಗಿರುವ ಆ ಮನೆಯ ಹತ್ತಿರ ದೋಣಿಯಲ್ಲಿ ತೆರಳುವ ಜವಾನರು ಬಳಿಕ ಮಾಡಿನ ಮೇಲೆ ಆಶ್ರಯ ಪಡೆದಿದ್ದ ಕೆಲವು ಮೇಕೆಗಳನ್ನು ಒಂದೊಂದಾಗಿ ದೋಣಿಗೆ ತುಂಬಿಸಿಕೊಳ್ಳುವ ದೃಶ್ಯ ಈ ವಿಡಿಯೋದಲ್ಲಿ ಸೆರೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next