Advertisement

ಮಹಿಳೆಯೊಂದಿಗೆ ಪೊಲೀಸರ ವಶವಾದ ಮಾನವ ಗುರಾಣಿ ಮೇಜರ್‌

07:36 PM May 23, 2018 | udayavani editorial |

ಶ್ರೀನಗರ : 2017ರಲ್ಲಿ ಯೋಧರ ಮೇಲೆ ಕಲ್ಲೆಸೆತ ನಡೆದಿದ್ದಾಗ ಸೆರೆಸಿಕ್ಕ ಓರ್ವ ಕಲ್ಲೆಸೆತಕೋರನನ್ನು ತನ್ನ ಜೀಪಿನ ಬಾನೆಟ್‌ಗೆ ಕಟ್ಟಿ ಆತನನ್ನು ಮಾನವ ಗುರಾಣಿಯಾಗಿ ಬಳಸಿಕೊಂಡ ಕಾರಣಕ್ಕೆ  ದೇಶಾದ್ಯಂತ  ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿದ್ದ  ಸೇನೆಯ ಮೇಜರ್‌ ಬಡಗಾಂವ್‌ನ ಸಮೀರ್‌ ಅಹ್ಮದ್‌ ಅವರನ್ನು ಇಲ್ಲಿನ ಹೊಟೇಲ್‌ನಲ್ಲಿ ಇಂದು ಓರ್ವ ಮಹಿಳೆಯೊಂದಿಗೆ ಪೊಲೀಸರು ವಶಕ್ಕೆ ತೆಗೆದುಕೊಂಡರು. 

Advertisement

ಇಲ್ಲಿನ ಹೊಟೇಲ್‌ ಗ್ರ್ಯಾಂಡ್‌ ಮಮತಾ ದಲ್ಲಿ ಬೆಳಗ್ಗೆ 11 ಗಂಟೆಯ ವೇಳೆಗೆ ರಿಸೆಪ್ಶನ್‌ ಕೌಂಟರ್‌ನಲ್ಲಿ ಕೆಲವು ವ್ಯಕ್ತಿಗಳು ಮತ್ತು ಹೊಟೇಲ್‌ ಸಿಬಂದಿಗಳಲ್ಲಿ ಮಾತಿನ ಜಗಳ ಜೋರಾಗಿ ನಡೆಯುತ್ತಿದ್ದ ಬಗ್ಗೆ ಫೋನ್‌ ಕರೆ ಬಂದಾಗ ಪೊಲೀಸರು ಅಲ್ಲಿಗೆ ಧಾವಿಸಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡರು.

ಪೊಲೀಸರು ವಶಕ್ಕೆ ತೆಗೆದುಕೊಂಡಿರುವವರಲ್ಲಿ ಬಡಗಾಂವ್‌ನ ಸೇನಾ ಮೇಜರ್‌ ಸಮೀರ್‌ ಅಹ್ಮದ್‌ ಕೂಡ ಸೇರಿದ್ದು ಅನಂತರದಲ್ಲಿ ಪೊಲೀಸರು ಅವರ ಹೇಳಿಕೆಯನ್ನು ದಾಖಲಿಸಿಕೊಂಡು ಬಳಿಕ ಅವರನ್ನು ಅವರ ಸೇನಾ ಘಟಕಕ್ಕೆ ಒಪ್ಪಿಸಿದರು ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next