Advertisement

ಮಹಿಳೆಗೆ ಚಪ್ಪಲಿ ಹಾರ ತೊಡಿಸಿ ಮೆರವಣಿಗೆ: ಸೇನಾ ಜವಾನ ಸೆರೆ

07:06 PM Dec 23, 2017 | Team Udayavani |

ಮುಂಬಯಿ : ಮಹಿಳೆಯ ಕುತ್ತಿಗೆಗೆ ಚಪ್ಪಲಿ ಹಾರ ತೊಡಿಸಿ ಆಕೆಯನ್ನು ಮೆರವಣಿಗೆ ಮಾಡಿಸಿದ ಸೇನಾ ಜವಾನನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಮಹಾರಾಷ್ಟ್ರದ ಉಸ್ಮಾನಾಬಾದ್‌ ಜಿಲ್ಲೆಯ ಉಮರ್ಗಾ ತೆಹಶೀಲ್‌ ವ್ಯಾಪ್ತಿಗೆ ಒಳಪಡುವ ಆಲೂರು ಗ್ರಾಮದಲ್ಲಿ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತನ್ನ ಪತ್ನಿಯ ವಿರುದ್ಧ 55ರ ಹರೆಯದ ಸಂತ್ರಸ್ತ ಮಹಿಳೆಯು ಮಾನಹಾನಿಕರವಾದ ಸುಳ್ಳು ವದಂತಿಗಳನ್ನು ಸೃಷ್ಟಿಸುತ್ತಿದ್ದಳು ಎಂಬ ಕಾರಣಕ್ಕೆ ಕುಪಿತಗೊಂಡ ಸೇನಾ ಜವಾನ ಶಿವಾನಂದ ಸ್ವಾಮಿ ಎಂಬಾತನು ಈ ಕೃತ್ಯ ಎಸಗಿರುವ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮುರುಂ ಪೊಲೀಸ್‌ ಠಾಣೆಯ ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌ ಎಂ ಐ ಶೇಖ್‌ ಅವರು ಸ್ವಾಮಿ ವಿರುದ್ಧ ಕೇಸು ದಾಖಲಿಸಿಕೊಂಡ ಬಳಿಕ ಆತನನ್ನು ತಾವು ಬಂಧಿಸಿರುವುದಾಗಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next